ಮಧೂರು: ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಈ ವರ್ಷದ ವಸಂತ ಪೂಜೆ ಯುಗಾದಿ ದಿನವಾದ ಮಾ. 19ರಿಂದ ಮೇ 16ರ ವರೆಗೆ ಹಾಗೂ ಕ್ಷೇತ್ರದ ವಾರ್ಷಿಕ ಜಾತ್ರಾ ಮಹೋತ್ಸವ ಏ. 14ರಿಂದ 18ರ ವರೆಗೆ ಜರುಗಲಿದೆ. ಈ ಕಾರ್ಯಕ್ರಮಗಳ ಯಶಸ್ವಿಗಾಗಿ ಸಹಾಯ ಸಹಕಾರ ನೀಡುವ ನಿಟ್ಟಿನಲ್ಲಿ ದೇವಸ್ಥಾನ ವತಿಯಿಂದ ಉತ್ಸವ ಸಮಿತಿ ರಚನಾ ಸಭೆ ಮಾ. 4ರಂದು ಸಂಜೆ 5ಕ್ಕೆ ದೇವಸ್ತಾನ ಸಭಾಂಗಣದಲ್ಲಿ ಜರುಗಲಿದೆ. ಸಭೆಯಲ್ಲಿ ಎಲ್ಲಾ ಭಕ್ತಾದಿಗಳು ಪಾಲ್ಗೊಂಡು ಸಲಹೆ, ಸಊಚನೆ ನೀಡುವಂತೆ ದೇವಾಲಯದ ಪ್ರಕಟಣೆ ತಿಳಿಸಿದೆ.

