ಉಪ್ಪಳ: ಉಪ್ಪಳ ಮಣಿಮುಂಡದಲ್ಲಿ ಸಾರಣೆ ಕೆಲಸದ ಮಧ್ಯೆ ಕಟ್ಟಡ ಸ್ಲ್ಯಾಬ್ ಕುಸಿದು ಮೈಮೇಲೆ ಬಿದ್ದ ಪರಿಣಾಮ ಕಾರ್ಮಿಕ ದಾರುಣವಾಗಿ ಮೃತಪಟ್ಟಿದ್ದಾರೆ. ಉಪ್ಪಳ ಜೋಡುಕಲ್ಲು ನವೋದಯ ನಗರ ನಿವಾಸಿ ಶಂಕರ(25)ಮೃತಪಟ್ಟವರು. ಕಟ್ಟಡದ ಸಾರಣೆ ಕೆಲಸ ನಡೆಸುವ ಮಧ್ಯೆ ಸ್ಲ್ಯಬ್ ಕುಸಿದು ಇವರ ಮೈಮೇಲೆ ಬಿದ್ದ ಪರಿಣಾಮ ಗಂಭೀರ ಗಾಯಗೊಂಡಿದ್ದರು. ತಕ್ಷಣ ಇವರನ್ನು ದೇರಳಕಟ್ಟೆಯ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ. ಶಂಕರ ಅವರ ಜತೆಗಿದ್ದ ಇತರ ನಾಲ್ವರು ಸ್ಲ್ಯಾಬ್ ಕುಸಿಯುತ್ತಿದ್ದಂತೆ ದೂರ ಓಡಿ ಪರಾರಿಯಾಗಿರುವುದರಿಂದ ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದರು.

