ಕಾಸರಗೋಡು: ದೇವಸ್ಥಾನಗಳಿಂದ ಕಳವು ನಡೆಸಿದ ಪ್ರಕರಣಕಕೆ ಸಂಬಂಧಿಸಿ ನೀಲೇಶ್ವರ ಠಾಣೆ ಪೊಲೀಸರು ಬಂಧಿಸಿದ್ದಾರೆ. ತ್ರಿಶ್ಯೂರ್ ಅಂಬಲ್ಲೂರ್ ನಿವಾಸಿ ಶಿಬುರಾಫೆಲ್ ಹಾಗೂ ಕಣ್ಣೂರು ಮಟ್ಟನ್ನೂರು ನಿವಾಸಿ ಅಬ್ದುಲ್ ಜಲೀಲ್ ಬಂಧಿತರು.
ನೀಲೇಶ್ವರ ಠಾಣೆ ಎಸ್.ಐ ಎ.ವಿ ಶ್ರೀಕುಮಾರ್ ನೇತೃಥ್ವದ ಪೊಲೀಸರ ತಂಡ ಆರೋಪಿಗಳನ್ನು ತಮಿಳ್ನಾಡಿನ ಎರ್ವಾಡ್ನಿಂದ ಬಂಧಿಸಿದೆ. ಫೆ. 21ರಂರು ನೀಲೇಶ್ವರ ಪೇರೋಲ್ ಕೊಳುಂತಿಲ್ನಾರಾಂಕುಳಂಗರ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಬೀಗ ಒಡೆದು ಆರು ಕಾಣಿಕೆ ಹುಂಡಿಗಳಿಂದ 25ಸಾವಿರಕ್ಕೂ ಹೆಚ್ಚು ನಗದು ಕಳವುಗೈದಿದ್ದರು. ಅಲ್ಲದೆ ಪಾಲಕ್ಕಾಡಿನ ಚುಳಲಿ ಭಗವತೀ ಕ್ಷೇತ್ರದಿಂದ ನಡೆದ ಕಳವುಪ್ರಕರಣದಲ್ಲೂ ಇವರು ಆರೋಪಿಗಳಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

