ಕಾಸರಗೋಡು: ಕಾಸರಗೋಡು ಕರಾವಳಿ ಸಾಂಸ್ಕøತಿಕ ಪ್ರತಿಷ್ಠಾನ (ರಿ.), ಕಾಸರಗೋಡು ಇದರ 36ನೇ ಸಂಸ್ಥಾಪನಾ ವರ್ಷಾಚರಣೆಯ ಅಂಗವಾಗಿ ಕಾಸರಗೋಡು ಕನ್ನಡ ಗ್ರಾಮದಲ್ಲಿ ನಿರ್ಮಾಣ ಕಾರ್ಯ ಆರಂಭಿಸಿರುವ' ಕಾಸರಗೋಡು ಗೋ- ಕುಟೀರ' ದ ಎರಡನೇ ಹಂತವಾಗಿ ಗೋ-ಮೇವು ಸಂಗ್ರಹಣಾಲಯ ಹಾಗೂ ಮೇಲ್ಚಾವಣಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಯಿತು.
ಧಾರ್ಮಿಕ ಮುಂದಾಳು ಡಾ.ಕೆ ಎನ್ ವೆಂಕಟ್ರಮಣ ಹೊಳ್ಳ ಕಾಮಗಾರಿಗೆ ಚಾಲನೆ ನೀಡಿದರು. ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು ಅಧ್ಯಕ್ಷತೆ ವಹಿಸಿದ್ದರು. ಗುತ್ತಿಗೆದಾರ ಕಿರಣ ಕುಮಾರ್ ಬಿ .ಕೆ, ರಾಜೇಶ್ ಕುಮಾರ್ ಕೆ.ಬೀರಂತ ಬೈಲ್, ದೀಕ್ಷಿತ್ ಆಚಾರ್ಯ, ದೀಪಕ್ ಚಂದ್ರ ಕೆ, ಪ್ರಸಾದ್ ಕೇಳು ಗುಡ್ಡೆ, ಜಗದೀಶ್ ಕೇಳು ಗುಡ್ಡೆ, ಅಶೋಕ, ಕಿಶೋರ್ ಕುಮಾರ್, ಕುಶಲಕುಮಾರ್, ರಾಧಾ ಕಾಸರಗೋಡು, ಸವಿತಾ ಕಿಶೋರ್, ಕಾವ್ಯ ಕುಶಲ,ಕೃಪಾನಿಧಿ, ಅನುಷಾ ,ಉಪಸ್ಥಿತರಿದ್ದರು. ಕಾಸರಗೋಡು ಪ್ರದೇಶದಲ್ಲಿ ಗೋವುಗಳನ್ನು ಗೋ-ಭಕ್ತಿಯಿಂದ ಆರಾಧಿಸಿಕೊಂಡು ಬರುತ್ತಿರುವ ನೂರಾರು ಗೋ-ಭಕ್ತರ ಧಾರ್ಮಿಕ ಶ್ರದ್ಧಾ ಕೇಂದ್ರವನ್ನಾಗಿ ರೂಪು ಗೊಳಿಸುವುದಕ್ಕಾಗಿ ಸಾರ್ವಜನಿಕರು ಹಾಗೂ ಗೋ-ಪೆÇೀಷಕರ ಸಹಕಾರ ಪೆÇ್ರೀತ್ಸಾಹ ಪ್ರಾಯೋಜಕ ತ್ವದಡಿಯಲ್ಲಿ ಸುಮಾರು 25 ಲಕ್ಷ ರೂಪಾಯಿ ವೆಚ್ಚದಲ್ಲಿ ಕಾಸರಗೋಡು ಗೋ- ಕುಟೀರದ ನಿರ್ಮಾಣ ಕಾಮಗಾರಿಯು ಭರದಿಂದ ನಡೆಯುತ್ತಿದೆ.



