ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, ಜಗತ್ತು ಈಗ ಅಸ್ಥಿರ ಹಂತಕ್ಕೆ ತಲುಪಿದೆ.
ಮುಂದೆ ಸವಾಲುಗಳು ಕಾದಿವೆ. ಭಾರತದ ತೈಲ ಸರಬರಾಜು ಅಪಾಯದಲ್ಲಿದೆ. ನಮ್ಮ ಆಮದುಗಳ 40% ಕ್ಕಿಂತ ಹೆಚ್ಚು ಹಾರ್ಮುಝ್ ಮೂಲಕ ಸಾಗುತ್ತದೆ. ಎಲ್ಪಿಜಿ ಮತ್ತು ಎಲ್ಎನ್ಜಿ ವಿಷಯದಲ್ಲಿ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಿದೆ ಎಂದು ಹೇಳಿದ್ದಾರೆ.
ಸಂಘರ್ಷವು ನಮ್ಮ ಹಿತ್ತಲನ್ನು ತಲುಪಿದೆ. ಇರಾನಿನ ಯುದ್ಧನೌಕೆ ಹಿಂದೂ ಮಹಾಸಾಗರದಲ್ಲಿ ಮುಳುಗಿಸಿರುವ ಬಗ್ಗೆ ವರದಿಯಾಗಿದೆ. ಆದರೂ ಪ್ರಧಾನಮಂತ್ರಿ ಈ ಬಗ್ಗೆ ಮೌನವಾಗಿದ್ದಾರೆ. ಇಂತಹ ಸಂದರ್ಭದಲ್ಲಿ ದೇಶಕ್ಕೆ ಸ್ಥಿರ ಹಾಗೂ ದಿಟ್ಟ ನಾಯಕತ್ವದ ಅಗತ್ಯವಿದೆ. ಆದರೆ, ನಾವು ಕಾರ್ಯತಂತ್ರದ ಸ್ವಾಯುತ್ತತೆಯನ್ನು ಬಿಟ್ಟುಕೊಟ್ಟ ರಾಜಿ ಮಾಡಿಕೊಂಡ ಪ್ರಧಾನಿಯನ್ನು ಹೊಂದಿದ್ದೇವೆ ಎಂದು ರಾಹುಲ್ ಗಾಂಧಿ ಟೀಕಿಸಿದ್ದಾರೆ.

