ಕಾಸರಗೋಡು: ಕೂಡ್ಲು ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆಗೆ ಕರ್ಣಾಟಕ ಬ್ಯಾಂಕ್ ವತಿಯಿಂದ ವಿದ್ಯಾರ್ಥಿಗಳ ಪ್ರಯಾಣ ಸೌಕರ್ಯಕ್ಕಾಗಿ ಬಸ್ ಕೊಡುಗೆಯಾಘಿ ನೀಡಲಾಯಿತು. ಈ ಸಂಬಂಧ ಕೀಲಿಕೈ ಹಸ್ತಾಂತರ ಸಮಾರಂಭ ಶಾಲಾ ವಠಾರದಲ್ಲಿ ನಡೆಯಿತು.
ಕರ್ನಾಟಕ ಬ್ಯಾಂಕ್ ಎಜಿಎಂ ವಿಶ್ವನಾಥ ಅವರು ಶಾಲಾ ಪ್ರಬಂಧಕ ಕೆ.ಜಿ.ಶ್ಯಾನುಭಾಗ್ ಅವರಿಗೆ ಕೀಲಿಕೈ ಹಸ್ತಾಂತರಿಸಿದರು. ಬ್ಯಾಂಕಿನ ಕಾಸರಗೋಡು ಶಾಖಾ ಪ್ರಬಂಧಕ ಹರಿಲಾಲ್, ಶಾಲಾ ಮುಖ್ಯ ಶಿಕ್ಷಕಿ ಶ್ರೀಜಾ, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಶ್ರೀಧರ ಕೂಡ್ಲು, ನಿವೃತ್ತ ಶಿಕ್ಷಕ ನರಸಿಂಹ ಮಯ್ಯ, ಎಸ್.ಎನ್.ಶ್ಯಾನುಭಾಗ್ ಮೊದಲಾದವರು ಉಪಸ್ಥಿತರಿದ್ದರು.

