ಕಾಸರಗೋಡು: ಚೆರ್ಕಳ-ಜಾಲ್ಸೂರು ರಸ್ತೆಯ ಬೋವಿಕ್ಕಾನದಲ್ಲಿ ಕಲ್ವರ್ಟ್ ಪುನರ್ನಿರ್ಮಾಣಕ್ಕೆ ಸಂಬಂಧಿಸಿದಂತೆ ಜೂನ್ 7 ರವರೆಗೆ ಸಂಚಾರ ನಿಯಂತ್ರಣ ವಿಧಿಸಲಾಗಿದೆ. ನಿರ್ಮಾಣ ಸ್ಥಳದ ಎರಡೂ ಬದಿಗಳಲ್ಲಿ ತಿರುವು ರಸ್ತೆಗಳನ್ನು ನಿರ್ಮಿಸಲಾಗುತ್ತಿದ್ದು, ವಾಹನಗಳು ನಿಧಾನಗತಿಯಲ್ಲಿ ಚಲಿಸುವಂತೆ ಲೋಕೋಪಯೋಗಿ ರಸ್ತೆ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ತಿಳಿಸಿದ್ದಾರೆ.

