ಬದಿಯಡ್ಕ: ಕುಂಬ್ಡಾಜೆ ಕುಟುಂಬ ಆರೋಗ್ಯ ಕೇಂದ್ರದಲ್ಲಿ ನಡೆದ ಎಚ್.ಪಿ.ವಿ. ಲಸಿಕೆ ಕಾರ್ಯಕ್ರಮವನ್ನು ಗ್ರಾಮ ಪಂಚಾಯತಿ ಉಪಾಧ್ಯಕ್ಷ ರವೀಂದ್ರ ರೈ ಗೋಸಾಡ ಉದ್ಘಾಟಿಸಿದರು. ಆರೋಗ್ಯ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಪ್ರಿಯಾಂಕಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಎಚ್.ಪಿ.ವಿ. ಲಸಿಕೆ ಕಾರ್ಯಕ್ರಮದಲ್ಲಿ ಲಸಿಕೆ ಪಡೆದವರಿಗೆ ಜನಪ್ರತಿನಿಧಿಗಳಾದ ಸೌಭಾಗ್ಯ ಲಕ್ಷ್ಮಿ, ಆಯಿಷತ್ ಮಸೀದ ಮತ್ತು ಬಬಿತಾ ರೇಶ್ಮಾ ಉಡುಗೊರೆಗಳನ್ನು ವಿತರಿಸಿದರು. ಸದಸ್ಯರಾದ ಸೌಭಾಗ್ಯ ಲಕ್ಷ್ಮಿ, ಆಯಿಷತ್ ಮಸೀದ ಮತ್ತು ಬಬಿತಾ ರೇಶ್ಮಾ ಲಸಿಕೆ ಸಮಾರಂಭದಲ್ಲಿ ಉಪಸ್ಥಿತರಿದ್ದರು. ವೈದ್ಯಾಧಿಕಾರಿ ಡಾ. ಸೈಯದ್ ಶುಹೈಬ್ ತಂಙಳ್, ಆರೋಗ್ಯ ನಿರೀಕ್ಷಕ ಸುರೇಶ್ ಕುಮಾರ್. ಎಲ್.ಎಚ್.ಐ. ಉಷಾ, ಜೆ.ಪಿ.ಎಚ್.ಎನ್. ನಿಶಾದ, ಜೆ.ಎಚ್. ಜಿಜು ಮಾರ್ಕೋಸ್, ಎಂಎಲ್ಎಸ್ಪಿ ನರ್ಸ್. ಮಿಥ್ಯಾ ನಂಬಿಯಾರ್, ಆಶಾ ಕಾರ್ಯಕರ್ತೆಯರಾದ ಶರ್ಮಿಳಾ, ಇಂದಿರಾ, ಎಚ್.ಪಿ.ವಿ ಸಿಬ್ಬಂದಿ, ವಿದ್ಯಾರ್ಥಿಗಳು ಮತ್ತು ಪೋಷಕರು ಭಾಗವಹಿಸಿದ್ದರು. ಎಚ್.ಪಿ.ವಿ ಲಸಿಕೆ ಪಡೆದ ಎಲ್ಲಾ ಮಕ್ಕಳಿಗೆ ಪ್ರಮಾಣಪತ್ರಗಳು ಮತ್ತು ಬಹುಮಾನಗಳನ್ನು ವಿತರಿಸಲಾಯಿತು.



