ಕುಂಬಳೆ: ಸ್ಕೂಟರಿನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭ ಹೃದಯಾಘಾತದಿಂದ ಸವಾರ ರಸ್ತೆಗೆ ಬಿದ್ದು ಮೃತಪಟ್ಟ ದಾರುಣ ಘಟನೆ ನಡೆದಿದೆ. ಕುಂಬಳೆ ಬಂಬ್ರಾಣದ ಚೂರಿತ್ತಡ್ಕ ನಿವಾಸಿ ಆಶ್ರಫ್ (58) ಮೃತಪಟ್ಟವರು.
ಸ್ಕೂಟರಿನಲ್ಲಿ ಭಾನುವಾರ ಕುಂಬಳೆಯಿಂದ ಮಂಗಳೂರಿಗೆ ಸಂಚರಿಸುವ ಮಧ್ಯೆ ತಲಪಾಡಿ ಟೋಲ್ಗೇಟ್ ದಾಟಿದ ತಕ್ಷಣ ಇವರು ಹೆದ್ದಾರಿಯಲ್ಲಿ ಸ್ಕೂಟರ್ನಿಂದ ಕುಸಿದು ಬಿದ್ದಿದ್ದರು. ಸ್ಥಳೀಯರು ತಕ್ಷಣ ಇವರನ್ನು ಮಂಗಳೂರಿನ ಆಸ್ಪತ್ರೆಗೆ ಸಾಗಿಸಿದರೂ ಪ್ರಯೋಜನವಾಗಿರಲಿಲ್ಲ. ಮೂಲತಃ ಮಂಗಳೂರು ಮೂಲದವರಾಗಿದ್ದು, ಕಳೆದ ಮೂರು ದಶಕಕ್ಕೂ ಹೆಚ್ಚುಕಾಳದಿಂದ ಬಂಬ್ರಾಣದ ಚೂರಿತ್ತಡ್ಕದಲ್ಲಿ ವಾಸಿಸುತ್ತಿದ್ದರು.


