HEALTH TIPS

'ಇರಾನ್ ದೇಶದ ಬೆಳವಣಿಗೆಗಳು ನಮಗೆ ಗಂಭೀರ ಆತಂಕ ವಿಷಯ; ಮಾನವೀಯ ನೆಲೆಯಲ್ಲಿ IRIS Lavan ಡಾಕಿಂಗ್‌ಗೆ ಅನುಮತಿ': ಎಸ್ ಜೈಶಂಕರ್

 ನವದೆಹಲಿಇರಾನ್-ಇಸ್ರೇಲ್, ಅಮೆರಿಕ ನಡುವಣ ಯುದ್ಧ, ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಬಿಕ್ಕಟ್ಟಿನ ಕುರಿತು ವಿದೇಶಾಂಗ ಸಚಿವ ಎಸ್ ಜೈಶಂಕರ್ ಇಂದು ರಾಜ್ಯಸಭೆಯಲ್ಲಿ ಹೇಳಿಕೆ ನೀಡಿದ್ದಾರೆ. 


ಪಶ್ಚಿಮ ಏಷ್ಯಾ ಬೆಳವಣಿಗೆಗಳು ಆತಂಕಕಾರಿ

ರಾಜ್ಯಸಭೆಯಲ್ಲಿ ಮಾತನಾಡಿದ ಜೈಶಂಕರ್, ಪಶ್ಚಿಮ ಏಷ್ಯಾದ ಬೆಳವಣಿಗೆಗಳು ಎಲ್ಲರಿಗೂ ಗಂಭೀರ ಆತಂಕದ ವಿಷಯವಾಗಿದೆ ಎಂದು ಹೇಳಿದರು. ಸಮಸ್ಯೆಗಳನ್ನು ಪರಿಹರಿಸಲು ಸಂವಾದ ಮತ್ತು ಚರ್ಚೆಯೇ ಸರಿಯಾದ ಮಾರ್ಗ ಎಂದು ಅವರು ಒತ್ತಿ ಹೇಳಿದರು.

ಫೆಬ್ರವರಿ 20ರಂದು ಭಾರತ ಸರ್ಕಾರ ಪ್ರಕಟಿಸಿದ ಹೇಳಿಕೆಯಲ್ಲಿ ಕೂಡ ಘರ್ಷಣೆಯಲ್ಲಿ ಸಂಬಂಧಪಟ್ಟವರೆಲ್ಲರೂ ಸಹನಶೀಲತೆ ತೋರಿಸಿ ಉದ್ವಿಗ್ನತೆ ಕಡಿಮೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಲಾಗಿತ್ತು. ಪ್ರಧಾನಿ ಪರಿಸ್ಥಿತಿಯನ್ನು ಸಮೀಪದಿಂದ ಗಮನಿಸುತ್ತಿದ್ದಾರೆ ಎಂದು ಜೈಶಂಕರ್ ತಿಳಿಸಿದರು.

ಇರಾನ್ ನೌಕೆಯ ಡಾಕಿಂಗ್ ಕುರಿತು ಮಾತನಾಡಿದ ಅವರು, ಆ ಪ್ರದೇಶದಲ್ಲಿದ್ದ ಮೂರು ಹಡಗುಗಳಿಗೆ ನಮ್ಮ ಬಂದರಿಗೆ ಬರಲು ಇರಾನ್ ಪಕ್ಕದಿಂದ ಅನುಮತಿ ಕೇಳಲಾಗಿತ್ತು. ಈ ಅನುಮತಿಯನ್ನು ಮಾರ್ಚ್ 3ರಂದು ನೀಡಲಾಯಿತು. ಐರಿಸ್ ಲಾವನ್ ಮಾರ್ಚ್ 4ರಂದು ಕೊಚ್ಚಿ ಬಂದರಿಗೆ ತಲುಪಿತು. ಹಡಗಿನ ಸಿಬ್ಬಂದಿ ಈಗ ಭಾರತೀಯ ನೌಕಾಪಡೆಯ ಸೌಲಭ್ಯಗಳಲ್ಲಿ ಇದ್ದಾರೆ. ಇದು ಮಾನವೀಯ ದೃಷ್ಟಿಯಿಂದ ಸರಿಯಾದ ಕ್ರಮ ಎಂದು ನಾವು ನಂಬುತ್ತೇವೆ. ಈ ಮಾನವೀಯ ಸಹಾಯಕ್ಕಾಗಿ ಇರಾನ್ ವಿದೇಶಾಂಗ ಸಚಿವರು ತಮ್ಮ ದೇಶದ ಪರವಾಗಿ ಧನ್ಯವಾದ ತಿಳಿಸಿದ್ದಾರೆ ಎಂದು ಹೇಳಿದರು.

ಭಾರತದ ನಿಲುವು – ಶಾಂತಿ, ನಾಗರಿಕರ ಸುರಕ್ಷತೆ, ರಾಷ್ಟ್ರೀಯ ಹಿತಾಸಕ್ತಿ

ಪ್ರಾದೇಶಿಕ ಪರಿಸ್ಥಿತಿಗೆ ಸಂಬಂಧಿಸಿದಂತೆ ಭಾರತದ ನಿಲುವನ್ನು ವಿವರಿಸಿದ ಜೈಶಂಕರ್, ಮೂರು ಪ್ರಮುಖ ಅಂಶಗಳನ್ನು ಉಲ್ಲೇಖಿಸಿದರು — ಶಾಂತಿ, ಭಾರತೀಯ ನಾಗರಿಕರ ಸುರಕ್ಷತೆ ಮತ್ತು ರಾಷ್ಟ್ರೀಯ ಹಿತಾಸಕ್ತಿ ರಕ್ಷಣೆ. ಭಾರತ ಶಾಂತಿ ಮತ್ತು ಸ್ಥಿರತೆಯನ್ನು ಪುನಃಸ್ಥಾಪಿಸುವ ಪ್ರಯತ್ನಗಳನ್ನು ಬೆಂಬಲಿಸುತ್ತದೆ. ಸಮಸ್ಯೆಗಳ ಪರಿಹಾರಕ್ಕೆ ಸಂವಾದ ಮತ್ತು ರಾಜತಾಂತ್ರಿಕ ಕ್ರಮಗಳು ಅಗತ್ಯವೆಂದು ಅವರು ಒತ್ತಿ ಹೇಳಿದರು. ಜೊತೆಗೆ ಉದ್ವಿಗ್ನತೆ ಕಡಿಮೆ ಮಾಡುವುದು, ಸಹನಶೀಲತೆ ತೋರಿಸುವುದು ಮತ್ತು ನಾಗರಿಕರ ಸುರಕ್ಷತೆಯನ್ನು ಖಚಿತಪಡಿಸುವ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕರೆ ನೀಡಿದರು.

ಇರಾನ್‌ ಧನ್ಯವಾದ 

ರಾಜ್ಯಸಭೆಯಲ್ಲಿ ನಡೆದ ಚರ್ಚೆಯ ವೇಳೆ ಜೈಶಂಕರ್, ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಗ್ಚಿ ಅವರು ಐರಿಸ್ ಲಾವನ್ ಹಡಗಿಗೆ ಕೊಚ್ಚಿ ಬಂದರಿನಲ್ಲಿ ಆಶ್ರಯ ನೀಡಿದಕ್ಕಾಗಿ ಭಾರತ ಸರ್ಕಾರಕ್ಕೆ ಧನ್ಯವಾದ ತಿಳಿಸಿದ್ದಾರೆ ಎಂದು ಹೇಳಿದರು. ಇದಕ್ಕೂ ಮೊದಲು ಅಮೆರಿಕಾದ ದಾಳಿಯಲ್ಲಿ ಐರಿಸ್ ಡೆನಾ ಎಂಬ ಮತ್ತೊಂದು ಇರಾನ್ ಹಡಗು ಶ್ರೀಲಂಕಾ ಕರಾವಳಿಯ ಬಳಿ ಮುಳುಗಿ, 87 ಮಂದಿ ಮೃತಪಟ್ಟಿದ್ದಾರೆ.

ಇರಾನ್‌ನಲ್ಲಿದ್ದ ಭಾರತೀಯರಿಗೆ ಮುನ್ನೆಚ್ಚರಿಕೆ

ಪಶ್ಚಿಮ ಏಷ್ಯಾದ ಉದ್ವಿಗ್ನತೆ ಹೆಚ್ಚಾಗುತ್ತಿರುವ ಸೂಚನೆಗಳ ಹಿನ್ನೆಲೆಯಲ್ಲಿ ಭಾರತ ಸರ್ಕಾರ ಇರಾನ್‌ನಲ್ಲಿದ್ದ ಭಾರತೀಯರಿಗೆ ಎಚ್ಚರಿಕೆ ನೀಡಿತ್ತು. ಜನವರಿಯಲ್ಲಿ ಇರಾನ್‌ಗೆ ಅಗತ್ಯವಿಲ್ಲದ ಪ್ರಯಾಣವನ್ನು ತಪ್ಪಿಸಲು ಸೂಚಿಸಲಾಗಿತ್ತು.

ಭಾರತೀಯರು ತಮ್ಮ ವಿವರಗಳನ್ನು ಟೆಹ್ರಾನ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ ನೋಂದಾಯಿಸಿಕೊಳ್ಳಬೇಕು ಹಾಗೂ ರಾಯಭಾರಿ ಕಚೇರಿಯ ವೆಬ್‌ಸೈಟ್ ಮತ್ತು ಸಾಮಾಜಿಕ ಜಾಲತಾಣಗಳನ್ನು ಗಮನಿಸಬೇಕು ಎಂದು ಸಲಹೆ ನೀಡಲಾಗಿತ್ತು.

ಫೆಬ್ರವರಿ 14ರಂದು ರಾಯಭಾರಿ ಕಚೇರಿ ಮತ್ತೊಂದು ಸೂಚನೆ ನೀಡಿ, ಸಾಧ್ಯವಾದ ಎಲ್ಲ ಸಾರಿಗೆ ಮಾರ್ಗಗಳ ಮೂಲಕ ಇರಾನ್ ತೊರೆಯುವಂತೆ ಭಾರತೀಯರಿಗೆ ಮನವಿ ಮಾಡಿತ್ತು. ಫೆಬ್ರವರಿ 23ರಂದು ಮತ್ತೊಮ್ಮೆ ಇದೇ ಸಲಹೆಯನ್ನು ನೀಡಲಾಯಿತು ಎಂದು ಅವರು ಹೇಳಿದರು.

ಸಂಘರ್ಷ ಪ್ರದೇಶಗಳಲ್ಲಿ ಭಾರತೀಯರೊಂದಿಗೆ ನಿರಂತರ ಸಂಪರ್ಕ

ಸರ್ಕಾರ ಗಲ್ಫ್ ಪ್ರದೇಶದಲ್ಲಿರುವ ಭಾರತೀಯರೊಂದಿಗೆ ನಿರಂತರ ಸಂಪರ್ಕದಲ್ಲಿದೆ ಎಂದು ಹೇಳಿದರು. ಟೆಹ್ರಾನ್ ನ ಭಾರತೀಯ ರಾಯಭಾರಿ ಕಚೇರಿ ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿದ್ದು, ಸಂಘರ್ಷದ ನಡುವೆ ಸಿಲುಕಿರುವ ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತಿದೆ. ಕೆಲ ವಿದ್ಯಾರ್ಥಿಗಳನ್ನು ಈಗಾಗಲೇ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಅವರು ತಿಳಿಸಿದರು.

ಕತಾರ್ ಮತ್ತು ಜೋರ್ಡನ್ ಸೇರಿದಂತೆ ಕೆಲವು ದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ಸುರಕ್ಷಿತವಾಗಿ ಮರಳಿ ತರಲು ಕೂಡ ಕ್ರಮಗಳು ನಡೆಯುತ್ತಿವೆ ಎಂದು ಅವರು ಹೇಳಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries