ಕುಂಬಳೆ: ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯ ಬಂಬ್ರಾಣ ಬೀರಂಟಿಕೆರೆಯಲ್ಲಿ ಯುವಕನಿಗೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಮೂವರ ವಿರುದ್ಧ ಕುಂಬಳೆ ಠಾಣೆ ಪೆÇಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ವಿನೀಶ್, ಸಂದೀಪ್ ಶೆಟ್ಟಿ, ಸುಧೀಶ್ ಎಂಬವರ ವಿರುದ್ಧ ಬಂಬ್ರಾಣ ಬೀರಂಟಿಕೆರೆ ನಿವಾಸಿ ಸಂಜಯ್ ಅವರ ದೂರಿನನ್ವಯ ಈ ಕೇಸು ದಾಖಲಾಘಿದೆ.
ಮೂರೂ ಮಂದಿ ಆರೋಪಿಗಳು ತನ್ನ ಹಿತ್ತಿಲಿಗೆ ಬಂದು ಮರದ ಸಲಾಕೆಯಿಂದ ಹೊಡೆದು ತನಗೆ ಹಲ್ಲೆ ನಡೆಸಿರುವುದಾಗಿ ಪೆÇಲೀಸರಿಗೆ ನೀಡಿದ ದೂರಿನಲ್ಲಿ ಸಂಜಯ್ ತಿಳಿಸಿದ್ದಾರೆ.

