ಸಮರಸ ಚಿತ್ರಸುದ್ದಿ: ಪೆರ್ಲ: ಕರ್ನಾಟಕ ಮಾಜಿ ಸಚಿವ, ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಎಣ್ಮಕಜೆ ಗ್ರಾಪಂ ವಾಣೀನಗರ ವ್ಯಾಪ್ತಿಯಲ್ಲಿ ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಎನ್.ಡಿ.ಎ. ಅಭ್ಯರ್ಥಿ ಕೆ.ಸುರೇಂದ್ರನ್ ಪರ ಮತ ಯಾಚನೆ ಮಾಡಿದರು. ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ, ಮಾಜಿ ಮಂಗಳೂರು ಮೇಯರ್ ಕವಿತಾ ಸನಿಲ್, ಎಣ್ಮಕಜೆ ಪಂಚಾಯಿತಿ ಎನ್.ಡಿ.ಎ. ಚುನಾವಣಾ ಪ್ರಭಾರಿ ಹರಿಪ್ರಸಾದ್ ಯಾದವ್, ಮಂಡಲ ಸಮಿತಿ ಸದಸ್ಯ ಸುರೇಶ್ ವಾಣೀನಗರ, ಬಿಜೆಪಿ ಮುಖಂಡ ಉದಯ ಶಂಕರ ಭಟ್ ಉಪಸ್ಥಿತರಿದ್ದರು.

.jpg)
