ಕಾಸರಗೋಡು: ಚುನಾವಣಾ ನೀತಿ ಸಂಹಿತೆಯ ಹಿನ್ನೆಲೆಯಲ್ಲಿ, ಸ್ಥಳೀಯಾಡಳಿತ ಇಲಾಖೆ ಸಂಸ್ಥೆಗಳ ತುರ್ತು ಯೋಜನೆಗಳ ಅನುಷ್ಠಾನಕ್ಕೆ ಅನುಮತಿ ನೀಡಿ ಆದೇಶ ಹೊರಡಿಸಲಾಗಿದೆ. ಸ್ಥಳೀಯಾಡಳಿತ ಇಲಾಖೆಯ ಯೋಜನೆಗಳ ಭಾಗವಾಗಿ ವೇತನ ಪಾವತಿ, ಮತ್ತು ಬೇಸಿಗೆಯ ರಜೆಯ ನಂತರ ಶಾಲೆ ತೆರೆಯುವ ಮೊದಲು ಶಾಲೆಗಳಲ್ಲಿ ವೇತನ ಪಾವತಿ, ಅಂಗನವಾಡಿಗಳಲ್ಲಿ ತುರ್ತು ದುರಸ್ತಿ, ಆರೋಗ್ಯ ಮತ್ತು ಪಶುವೈದ್ಯಕೀಯ ಸಂಸ್ಥೆಗಳಿಗೆ ಅಗತ್ಯವಿರುವ ಔಷಧ ಖರೀದಿ, ಅಂಗನವಾಡಿ ಪೌಷ್ಟಿಕಾಂಶ ವಿತರಣಾ ಯೋಜನೆ, ಉಪಶಮನ ಆರೈಕೆ ಯೋಜನೆಗಳು ಮತ್ತು ಮಳೆಗಾಲ ಪೂರ್ವ ಶುಚಿಗೊಳಿಸುವ ಕಾರ್ಯಗಳಣ್ನು ಯಾವುದೇ ತಡೆಯಿಲ್ಲದೆ ಕೈಗೊಳ್ಳಬೇಕಾದ ಯೋಜನೆಗಳ ತುರ್ತು ಸ್ವರೂಪವನ್ನು ಪರಿಗಣಿಸಿ, ರಾಜ್ಯ ಮಟ್ಟದಲ್ಲಿ ಸ್ಥಳೀಯಾಡಳಿತ ಇಲಾಖೆಯು ಯೋಜನೆಗಳಿಗೆ ಅನುಮೋದನೆ ನೀಡಿದೆ.

