ಸಮರಸ ಚಿತ್ರಸುದ್ದಿ: ಕಾಸರಗೋಡು: ಕಾಸರಗೋಡಿನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಐದು ದಶಕಕ್ಕೂ ಹೆಚ್ಚು ಕಾಲ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸಿ ಇತ್ತೀಚೆಗೆ ನಿಧನರಾದ ರಾಧಾಕೃಷ್ಣ ಅಡಿಗರ ವೈಕುಂಠ ಸಮಾರಾಧನೆಗೆ ಶಬರಿಮಲೆ ಪ0ದಲ ರಾಜಮನೆತನದ ನಾರಾಯಣ ರಾಜ ವರ್ಮಾ ಅವರು ಆಗಮಿಸಿ ಕುಟುಂಬದವರಿಗೆ ಸಾಂತ್ವನ ಹೇಳಿದರು. ಈ ಸಂದರ್ಭ ಕಾಸರಗೋಡಿನ ಶ್ರೀ ಧರ್ಮಶಾಸ್ತಾ ಸೇವಾ ಸಂಘದ ಕಾರ್ಯಾಧ್ಯಕ್ಷ ಡಾ. ಕೆ.ಎನ್.ವೆಂಕಟ್ರಮಣ ಹೊಳ್ಳ ಶಾಲು ಹೊದಿಸಿ ಸ್ವಾಗತಿಸಿದರು. ಶಂಕರ ನಾರಾಯಣ ಅಡಿಗ.ನಾರಾಯಣ ಗುರು ಸ್ವಾಮಿ ಉದಯಗಿರಿ, ಕೆ.ಕೆ.ಮಯ್ಯ ನೀರ್ಚಾಲು ಜೊತೆಗಿದ್ದರು.


