ಉಪ್ಪಳ : ದುರ್ಗಾಶಕ್ತಿ ಕುಣಿತ ಭಜನಾ ತಂಡ ಪರಂಬಳ ಕಯ್ಯಾರು ಇದರ ವತಿಯಿಂದ ಅಭಿನಂದನಾ ಸಭೆ 24 ರಂದು ಬೆಳಿಗ್ಗೆ 9.30ಕ್ಕೆ ಶ್ರೀ ಭಾರತ್ ಮಾತಾ ಸೇವಾ ಟ್ರಸ್ಟ್ ಪರಂಬಳ ಕಯ್ಯಾರು ಇದರ ಸಭಾಂಗಣದಲ್ಲಿ ನಡೆಯಲಿದೆ. ದುರ್ಗಾ ಶಕ್ತಿ ಕುಣಿತ ಭಜನಾ ತಂಡ ಪರಂಬಳ ಕಯ್ಯಾರು ಇದರ ಗೌರವ ಮಾರ್ಗದರ್ಶಕಿ ರಮ್ಯಾ ಎನ್. ಸೀತಾಂಗೋಳಿ ಅಧ್ಯಕ್ಷತೆ ವಹಿಸÀುವರು. ಗೀತಾ ಸಾಹಿತ್ಯ ಸಂಭ್ರಮದ ವಿಠಲ ನಾಯಕ್ ಕಲ್ಲಡ್ಕ ದಿಕ್ಸೂಚಿ ಭಾಷಣ ಮಾಡುವರು. ಮುಖ್ಯ ಅತಿಥಿಗಳಾಗಿ ಕುಂಬಳೆ ಅಬಕಾರಿ ಅಧಿಕಾರಿ ಪ್ರಜಿತ್, ವಸುದೈವ ಭಜನಾ ಕುಟುಂಬ ಅಖಂಡ ಭಾರತ ಇದರ ಸದಸ್ಯ ರವಿ ಮಂಜನಾಡಿ, ಸಾಮಾಜಿಕ ಕಾರ್ಯಕರ್ತ ಲೋಕೇಶ್ ನೋಂಡ ಜೋಡುಕಲ್ಲು, ಪದ್ಮಾಶಾಲಿ ಸಮಾಜ ಸೇವಾ ಸಮಿತಿ ಪೈವಳಿಕೆ ಇದರ ಅಧ್ಯಕ್ಷ ಉಮೇಶ್ ಕುಂಡೇರಿ, ಭಜನಾ ಶಿಕ್ಷಕಿ ಸಂಧ್ಯಾ, ಭಾರತ ಮಾತಾ ಸೇವಾ ಟ್ರಸ್ಟ್ ಪರಂಬಳ ಕಯ್ಯಾರು ಇದರ ಅಧ್ಯಕ್ಷ ಗಿರೀಶ್ ಕುಮಾರ್ ಕಯ್ಯಾರು ಭಾಗವ ಹಿಸುವರು. ಎಸ್.ಎಸ್.ಎಲ್.ಸಿ ಯಲ್ಲಿ ಶೇ.80 ಕ್ಕಿಂತ ಹೆಚ್ಚು ಅಂಕ ಪಡೆದ ಭಜನಾ ವಿದ್ಯಾರ್ಥಿಗಳನ್ನು ಮತ್ತು ಭಜನಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಅಭಿನಂದಿಸಲÁಗುವುದು.

