ಕಾಸರಗೋಡು: ಕೇರಳ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಉದುಮ ವಿಧಾನಸಭಾ ಕ್ಷೇತ್ರದಿಂದ ಯುಡಿಎಫ್ ಅಭ್ಯರ್ಥಿ ಕೆ.ನೀಲಕಂಠನ್ ಜಯಬೇರಿ ಬಾರಿಸಿದ್ದಾರೆ.
ಕಳೆದ ಬಾರಿಯ ಶಾಸಕ, ಎಲ್ ಡಿಎಫ್ ಅಭ್ಯರ್ಥಿ ಸಿ.ಎಚ್.ಕುಞoಬು ವಿರುದ್ಧ ನೀಲಕಂಠನ್ 4,864 ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದ್ದಾರೆ.
ಕೆ.ನೀಲಕಂಠನ್ 78,602 ಮತಗಳನ್ನು ಗಳಿಸಿದ್ದರೆ, ಸಿ.ಎಚ್.ಕುಞಾoಬು 73,738 ಮತಗಳನ್ನು ಗಳಿಸಿದ್ದಾರೆ,
ಎನ್ ಡಿಎ ಅಭ್ಯರ್ಥಿ ಮನುಲಾಲ್ 26,746 ಮತಗಳನ್ನಷ್ಟೇ ಗಳಿಸಿದ್ದಾರೆ.

