ಬದಿಯಡ್ಕ: ಉದಯಗಿರಿ ಬಾಂಜತ್ತಡ್ಕ ಶ್ರೀ ಸತ್ಯನಾರಾಯಣ ಭಜನಾ ಮಂದಿರದ 26ನೇ ವಾರ್ಷಿಕೋತ್ಸವ ಶುಕ್ರವಾರ ಜರಗಿತು. ವೇದಮೂರ್ತಿ ಶ್ರೀ ಪಾಂಡೇಲು ಶಿವಶಂಕರ ಭಟ್ಟರ ನೇತೃತ್ವದಲ್ಲಿ ಶ್ರೀ ಸತ್ಯನಾರಾಯಣ ಪೂಜೆ ನೆರವೇರಿತು. ಗೀತಾಜ್ಞಾನ ಯಜ್ಞ ಪಾರಾಯಣ ಘಟಕ ಬದಿಯಡ್ಕ ಇವರಿಂದ ಭಗವದ್ಗೀತಾ ಪಾರಾಯಣ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಅನ್ನದಾನ ನಡೆಯಿತು. ಶ್ರೀ ಪೂಮಾಣಿ ಕಿನ್ನಿಮಾಣಿ ಶ್ರೀರಾಮ ಅಯ್ಯಪ್ಪ ಭಜನಾ ಮಂಡಳಿ ಪೂಂಗೋಡಿ ಮಾಡ ಮಾಡತ್ತಡ್ಕ ಹಾಗೂ ಕುದಿರೆಕ್ಕಾಳಿ ಅಮ್ಮ ಮಹಿಳಾ ಭಜನಾ ಸಂಘ ರತ್ನಗಿರಿ ನೀರ್ಚಾಲು ಇವರಿಂದ ಭಜನಾ ಸೇವೆ ನಡೆಯಿತು. ರಾಮ ಇಕ್ಕೇರಿ ಭಾಗವತ ಪಾರಾಯಣ ನಡೆಸಿಕೊಟ್ಟರು. ರಾತ್ರಿ ಮಂಗಳಾರತಿ, ಪ್ರಸಾದ ವಿತರಣೆಯ ನಂತರ ಗಡಿನಾಡ ಸಾಂಸ್ಕøತಿಕ ಕಲಾವೇದಿಕೆ ಕಾಸರಗೋಡು ಇವರಿಂದ ಸಾಂಸ್ಕøತಿಕ ಕಲಾವೈಭವ ನಡೆಯಿತು.


