ಕಾಸರಗೋಡು: ಉದುಮದ ಕಾಂಗ್ರೆಸ್ ಕಾರ್ಯಕರ್ತ ಮತ್ತು ಹಡಗಿನಲ್ಲಿ ಉದ್ಯೋಗಿಯಾಗಿದ್ದ ಉದುಮದ ಚಕ್ಲಿ ನಿವಾಸಿ ಪ್ರಶಾಂತ್ ಸಂಸ್ಮರಣಾ ಸಮಾರಂಭ ಉದುಮದಲ್ಲಿ ಜರುಗಿತು. 2025 ಮೇ 14 ರಂದು ಹಡಗಿನಲ್ಲಿ ಕೆಲಸ ನಡೆಸುತ್ತಿರುವ ಮಧ್ಯೆ, ಅಟ್ಲಾಂಟಿಕ್ ಸಾಗರದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದರು.
ಕಲೆ ಮತ್ತು ಕ್ರೀಡಾ ಕ್ಷೇತ್ರಗಳೊಂದಿಗೆ ಕಾಂಗ್ರೆಸ್ ಪಕ್ಷದ ಸಕ್ರಿಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಪ್ರಶಾಂತ್ ಅವರ ಸಮಾಜಮುಖೀ ಚಟುವಟಿಕೆಗಳನ್ನು ಈ ಸಂದರ್ಭ ಅವಲೋಕನ ನಡೆಸಲಯಿತು. ಪ್ರಶಾಂತ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಡಿಸಿಸಿ ಪ್ರಧಾನ ಕಾರ್ಯದರ್ಶಿ ಗೀತಾ ಕೃಷ್ಣನ್ ಉದ್ಘಾಟಿಸಿದರು. ಮಂಡಲ ಕಾಂಗ್ರೆಸ್ ಅಧ್ಯಕ್ಷ ಶ್ರೀಧರನ್ ವಯಲಿಲ್ ಅಧ್ಯಕ್ಷತೆ ವಹಿಸಿದ್ದರು.
ಸಾರ್ವಜನಿಕ ಪ್ರತಿನಿಧಿಗಳಾದ ಸುಕುಮಾರಿ ಶ್ರೀಧರನ್, ಬಿಂದು ಸುಧನ್, ಚಂದ್ರನ್ ನಾಲಾಂವಾದಿಲ್, ಸಿಕೆ ವೇಣು ಮಾಸ್ಟರ್, ಪಿ.ವಿ.ಕೃಷ್ಣನ್, ಜನಶ್ರೀ ಮಿಷನ್ ಉದುಮ ಮಂಡಲದ ಅಧ್ಯಕ್ಷ ಪಿ.ವಿ. ಉದಯಕುಮಾರ್, ಮಂಡಲ ಕಾಂಗ್ರೆಸ್ ಮುಖಂಡರಾದ ಪಂತಲ್ ನಾರಾಯರ್, ಶಿಬು ಕಡವಂಗಾನಂ, ಚಂದ್ರನ್ ಉದಯಮಂಗಲಂ, ಶ್ರೀಜಾ ಪುರುಷೋತ್ತಮನ್ ಉಪಸ್ಥಿತರಿದ್ದರು.



