ಕಾಸರಗೋಡು: ನಗರದ ನುಳ್ಳಿಪ್ಪಾಡಿ ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ(ರಿ.)ದ ಕನ್ನಡ ಭವನ ಪ್ರಕಾಶನದ ಕೇರಳ ರಾಜ್ಯ ಕಾಸರಗೋಡಿನ ಕನ್ನಡಭವನ ರಜತಸಂಭ್ರಮ ಸಮಾರೋಪ ಅಂಗವಾಗಿ ಡಾ. ಸಿದ್ರಾಮ ನೀಲಜಗಿ ಸಾರಥ್ಯದ ಶ್ರೀ ಲಕ್ಕಮ್ಮದೇವಿ ಕಲಾ ಪೆÇೀಷಕ ಸಂಘ(ರಿ.) ಸಹಯೋಗದಲ್ಲಿ'ಕರ್ನಾಟಕ ಗಡಿನಾಡು ಕನ್ನಡ ಸಮ್ಮೇಳನ-2026' ಜುಲೈ 26ರಂದು ಕನ್ನಡಭವನದ ದಿ. ಡಾ. ಲಲಿತಾ ಎಸ್.ಎನ್. ಭಟ್ ವೇದಿಕೆಯಲ್ಲಿ ಜರುಗಲಿದೆ.
ಈ ಸಂದರ್ಭ ಉದ್ಘಾಟನೆ-ಪ್ರಶಸ್ತಿ ಪ್ರದಾನ, ಪುಸ್ತಕ ಬಿಡುಗಡೆ, ಕವಿಗೋಷ್ಠಿ, ಸಾಂಸ್ಕೃತಿಕ - ಸಮಾರೋಪ ಸಮಾರಂಭ ನಡೆಯುವುದು. ರಾಷ್ಟ್ರವ್ಯಾಪಿ ಕನ್ನಡ ಕಾರ್ಯಕ್ರಮಗಳ ಸರದಾರ ಡಾ. ಸಿದ್ರಾಮ ನೀಲಜಗಿ ಸಾರಥ್ಯದ ಸಂಸ್ಥೆ ನೀಡುವ'ಕರ್ನಾಟಕ ಕನ್ನಡ ರತ್ನ ಪ್ರಶಸ್ತಿ-2026', ರಾಷ್ಟ್ರೀಯ ಭರತ ವಿಭೂಷಣ ಪ್ರಶಸ್ತಿ-2026', ಕನ್ನಡ ಭವನದ ಪ್ರತಿಷ್ಠಿತ ಪ್ರಶಸ್ತಿಯಾದ ರಾಷ್ಟ್ರಕವಿ ಗೋವಿಂದ ಪೈ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ, ನಾಡೋಜ ಡಾ.ಕಯ್ಯಾರ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ, ಕನ್ನಡ ಪಯಸ್ವಿನಿ ಅಚೀವ್ಮೆಂಟ್ ಅವಾರ್ಡ್-2026 ಪ್ರದಾನ ಸಮಾರಂಭವೂ ನಡೆಯುವುದು.

