ಕಾಸರಗೋಡು: ಮಾದಕದ್ರವ್ಯದ ವಿರುದ್ಧ ಪೋಲೀಸ್ ಇಲಾಖೆ ಆರಂಭಿಸಿರುವ ಆಪರೇಶನ್ ತೂಫಾನ್ ಕಾರ್ಯಾಚರಣೆಯನ್ವಯ ಕೋಯಿಕ್ಕೋಡಿನ ಪಂದಿರಾಂಕಾವಿನಲ್ಲಿ ಪೆÇಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ ಕೇರಳದಲ್ಲಿ ನಿಷೇಧಿಸಲ್ಪಟ್ಟ 400 ಕಿಲೋ ತಂಬಾಕು ಉತ್ಪನ್ನವನ್ನು ವಶಪಡಿಸಿಕೊಂಡಿದ್ದು, ಕಾಸರಗೋಡು ನಿವಾಸಿಯನ್ನು ಬಂಧಿಸಿದ್ದಾರೆ.
ಕಾಸರಗೋಡು ಗಾಳಿಮುಖ ನಿವಾಸಿ ಅಬ್ದುಲ್ ಸಾಕೀರ್ (28)ಬಂಧಿತ. ವಶಪಡಿಸಿಕೊಂಡ ತಂಬಾಕು ಉತ್ಪನ್ನದ ಮೌಲ್ಯ 10 ಲಕ್ಷ ರೂ. ಅಂದಾಜಿಸಲಾಗಿದೆ. 16 ಗೋಣಿ ಚೀಲಗಳಲ್ಲಿ ತುಂಬಿ ಕಾರಿನಲ್ಲಿ ಸಾಗಿಸುವಮಧ್ಯೆ ಕಾರ್ಯಾಚರಣೆ ನಡೆಸಲಾಗಿದೆ. ತಂಬಾಕು ಉತ್ಪನ್ನ ಮೈಸೂರಿನಿಂದ ಎರ್ನಾಕುಳಂಗೆ ಸಾಗಿಸುತ್ತಿದ್ದ ಸಂದರ್ಭ ಸಿಟಿ ಪೆÇಲೀಸ್ ಕಮಿಷನರ್ಗೆ ಲಭಿಸಿದ ಗುಪ್ತ ಮಾಹಿತಿಯಂತೆ ಪಂದಿರಾಂಕಾವು ಠಾಣೆ ಪೋಲೀಸರು ಮತ್ತು ಡ್ಯಾನ್ಸಾಫ್ ತಂಡದವರು ಕಾರ್ಯಾಚರಣೆ ನಡೆಸಿದ್ದಾರೆ.

