ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ವಿ. ಮೋಹನ್ ಅವರನ್ನೊಳಗೊಂಡ ಪೀಠ, 'ಫ್ರೆಂಡ್ಸ್ ಆಫ್ ಪೀಪಲ್ ಫಾರ್ ಆಯಕ್ಟಿವ್ ಡೆಮಾಕ್ರೆಸಿ' ಎಂಬ ಎನ್ಜಿಒ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿತು.
ಪೀಠ ಈ ಅರ್ಜಿಯನ್ನು ವಿಚಾರಣೆಗೆ ಬಾಕಿ ಇರುವ ಇದೇ ವಿಷಯಕ್ಕೆ ಸಂಬಂಧಿದ ಅರ್ಜಿಗಳೊಂದಿಗೆ ಸೇರಿಸಿತು.
''ನಾವು ಇಂದು ಒಂದೇ ಸಾಲಿನ ಆದೇಶವನ್ನು ಹೊರಡಿಸಲು ಸಾಧ್ಯವಿಲ್ಲ. ಈ ವಿಷಯದ ಕುರಿತು ಸುದೀರ್ಘವಾಗಿ ವಾದ ಮಂಡಿಸಲಾಗಿದೆ. ಮಧ್ಯಂತರ ತಡೆಯ ಪ್ರಶ್ನೆಯೇ ಇಲ್ಲ'' ಎಂದು ಪೀಠ ಹೇಳಿತು.

