ನವದೆಹಲಿ: 'ನಾನು ಬೀದಿ ಹೋರಾಟಗಾರ, ಎ.ಸಿ ಕೊಠಡಿ ಕಾರ್ಯಕರ್ತ' ಅಲ್ಲ ಎಂದು ಬಿಜೆಪಿ ಸಂಸದ ಧರ್ಮೇಂದ್ರ ಪ್ರಧಾನ್ ಅವರು ಸೋಮವಾರ ಸಂಸತ್ ಆವರಣದಲ್ಲಿ ಹೇಳಿದರು. ನೀಟ್ ಪಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ, ಯುವಜನರ ಒತ್ತಡಕ್ಕೆ ಮಣಿದು ರಾಜೀನಾಮೆ ನೀಡಿದ ಎರಡು ದಿನಗಳ ಬಳಿಕ ಅವರು ಹೀಗೆ ಹೇಳಿದ್ದಾರೆ.
ಕಾಂಗ್ರೆಸ್ ಸಂಸದ ಜೈರಾಮ್ ರಮೇಶ್ ಅವರೊಂದಿಗೆ ಸ್ನೇಹಪೂರ್ವಕ ಸಂಭಾಷಣೆ ವೇಳೆ ಅವರು ಹೀಗೆ ಹೇಳಿದ್ದಾರೆ.
ಸಂಸತ್ ಮೊಗಸಾಲೆಯಲ್ಲಿ ಪತ್ರಕರ್ತರ ಗುಂಪಿನೊಂದಿಗೆ ಜೈರಾಮ್ ರಮೇಶ್ ಅನೌಪಚಾರಿಕ ಮಾತುಕತೆ ನಡೆಸುವ ವೇಳೆ ಪ್ರಧಾನ್ ಎದುರಾದರು.
ಅದಕ್ಕೂ ಮುನ್ನ ಸಂಸತ್ ಆವರಣಕ್ಕೆ ಬಂದ ಪ್ರಧಾನ್ ಅವರನ್ನು ಎನ್ಡಿಎ ಸಂಸದರು ಸ್ವಾಗತಿಸಿದರು. ಕಾರಿನಿಂದ ಇಳಿದು ಬರುವಾಗ 'ಧರ್ಮೇಂದ್ರ ಪ್ರಧಾನ್ ಜಿಂದಾಬಾದ್' ಎಂದು ಕೂಗಿದರು. ಟೋಪಿ ಹಾಕಿ, ಶಾಲು ಹೊದಿಸಿ ಸನ್ಮಾನಿಸಿದರು.

