ಕಾಸರಗೋಡು: ನಗರದ ಕರಂದಕ್ಕಾಡು ಬಿಲ್ಲವ ಸೇವಾ ಸಂಘದ ವತಿಯಿಂದ ಕರಂದಕ್ಕಾಡು ಬ್ರಹ್ಮಶ್ರೀ ನಾರಾಯಣ ಗುರು ಮಂದಿರದಲ್ಲಿ 172ನೇ ಶ್ರೀ ನಾರಾಯಣ ಗುರು ಜಯಂತಿ ಆ. 28ರಂದು ಜರುಗಲಿರುವುದು.
ಶ್ರೀ ನಾರಾಯಣ ಗುರು ಜಯಂತಿಯ ಆಮಂತ್ರಣ ಪತ್ರದ ಬಿಡುಗಡೆ ಸಮಾರಂಭ ಶ್ರೀ ನಾರಾಯಣ ಗುರು ಮಂದಿರದ ಸನ್ನಿಧಿಯಲ್ಲಿ ನೆರವೇರಿತು. ಬಿಲ್ಲವ ಸೇವಾ ಸಂಘದ ಅಧ್ಯಕ್ಷ ರಘು ಕೆ ಮೀಪುಗುರಿ ಅವರು ಕಾಸರಗೋಡು ನಗರಸಭಾ ಸದಸ್ಯ ಹರೀಶ್ ಕೆ. ಆರ್ ಅವರಿಗೆ ಆಮಂತ್ರಣ ಪತ್ರವನ್ನು ನೀಡಿ ಬಿಡುಗಡೆಗೊಳಿಸಿದರು. ಕಾರ್ಯಕ್ರಮದಲ್ಲಿ ಪ್ರಧಾನ ಕಾರ್ಯದರ್ಶಿ ಹರಿಕಾಂತ ಕಾಸರಗೋಡು, ಕೋಶಾಧಿಕಾರಿ ಶಮ್ಮಿ ಕುಮಾರ್, ಕಮಲಾಕ್ಷ ಸೂರ್ಲು, ಮೈಂದಪ್ಪ, ರವಿ ಪೂಜಾರಿ, ರೋಹಿಣಿ ಮೊದಲಾದವರು ಉಪಸ್ಥಿತರಿದ್ದರು.


