ಕಾಸರಗೋಡು: ರಾಷ್ಟ್ರೀಯ ಕೃಷಿಕರ ದಿನಾಚರಣೆ ಅಂಗವಾಗಿ ಗೌರವಾರ್ಪಣೆ ಕಾರ್ಯಕ್ರಮ ಕಾಸರಗೋಡು ಬಾಲಭವನ್ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಜರುಗಿತು. ಈ ಸಂದರ್ಭ ಶ್ರೀ ಗೋಪಾಲಕೃಷ್ಣ ಪ್ರೌಢ ಶಾಲೆ ನಿವೃತ್ತ ಮುಖ್ಯ ಶಿಕ್ಷಕ ಹಾಗೂ ಪ್ರಗತಿಪರ ಕೃಷಿಕ ಸದಾಶಿವ ಶಾನ್ ಬಾಗ್ ಅವರ ಪತ್ನಿ ಮೊಹಿನಿ ರಾವ್ ಅವರನ್ನು ಶಾಲೆಯ ಪರವಾಗಿ ಗೌರವಿಸಲಾಯಿತು. ಶಾಲಾ ಮುಖ್ಯ ಶಿಕ್ಷಕಿ ಲೀಲಾವತಿ ನಾಯರ್ ಅವರು ಮೋಹಿನಿರಾವ್ ಅವರನ್ನು ಶಾಲುಹೊದಿಸಿ, ಫಲಕ ನೀಡಿ ಗೌರವಿಸಿದರು.
ಸನ್ಮಾನ ಸ್ವೀಕರಿಸಿದ ಮೋಹಿನಿ ರಾವ್ ಅವರು ವಿದ್ಯಾರ್ಥಿಗಳಿಗೆ ಹಿತವಷನ ನೀಡಿದರು. ಸಮಾರಂಭದಲ್ಲಿ ಎಜುಕೇಷನ್ ಅಕಾಡಮಿಕ್ ಅಡ್ವೈಸರ್ ಕೆ.ಎನ್. ವೆಂಕಟ್ರಮಣ ಹೊಳ್ಳ, ಪಿಟಿಎ ಉಪಾಧ್ಯಕ್ಷೆ ಶೀಬಾ, ಕೋಶಾಧಿಕಾರಿ ಪೌಲೋಸ್, ಶಾಲಾ ಅಧ್ಯಾಪಿಕೆಯರು ಉಪಸ್ಥಿತರಿದ್ದರು. ಆರತಿ ಟೀಚರ್ ಸ್ವಾಗತಿಸಿದರು. ಸುಜಾತ ಟೀಚರ್ ವಂದಿಸಿದರು.


