ಕಾಸರಗೋಡು: ಜಿಲ್ಲಾ ಮಟ್ಟದ ಓಣಂ ಆಚರಣೆಯ ಅಂಗವಾಗಿ ಆಗಸ್ಟ್ 29 ರಂದು ಸಂಜೆ 4ಕ್ಕೆ ಕಾಸರಗೋಡು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಹುಲಿ ಕುಣಿತ, 7ಕ್ಕೆ 'ಕೈಕೊಟ್ಟಿಕಳಿ' ಮತ್ತು 'ತಿರುವಾದಿರ', ಹಾಗೂ ರಾತ್ರಿ 8ಕ್ಕೆ 'ಓಣಂ ಡಿಜೆ ಸಂಜೆ'ನಡೆಯಲಿವೆ.
ಆಗಸ್ಟ್ 30 ರಂದು ಮಧ್ಯಾಹ್ನ 3.30ಕ್ಕೆ ಕಾಸರಗೋಡು ನಗರದಲ್ಲಿ ಸಾಂಸ್ಕøತಿಕ ಮೆರವಣಿಗೆಯನ್ನು ಆಯೋಜಿಸಲಾಗಿದೆ. ನುಳ್ಳಿಪ್ಪಾಡಿ ಅಯ್ಯಪ್ಪ ಭವನದಿಂದ ಆರಂಭವಾಗುವ ಈ ಮೆರವಣಿಗೆಯು ಎಂ.ಜಿ. ರಸ್ತೆ, ಟ್ರಾಫಿಕ್ ಸರ್ಕಲ್, ಮಲ್ಲಿಕಾರ್ಜುನ ದೇವಸ್ಥಾನ, ಏರ್ಲೈನ್ ಸರ್ಕಲ್, ಕಾಸರಗೋಡು ಅಂಚೆ ಕಚೇರಿ ಮತ್ತು ಎಲ್ಐಸಿ (ಐIಅ) ಕಚೇರಿಯ ಮೂಲಕ ಸಾಗಿ, ಅಂತಿಮವಾಗಿ ಕಾಸರಗೋಡು ಸರ್ಕಾರಿ ಹಿರಿಯ ಮಾಧ್ಯಮಿಕ ಶಾಲೆಯಲ್ಲಿ ಮುಕ್ತಾಯಗೊಳ್ಳಲಿದೆ. ಮೆರವಣಿಗೆಯಲ್ಲಿ 'ಶಿಂಕಾರಿ ಮೇಳ' ಮತ್ತು 'ಚೆಂಡೆ ಮೇಳ' ಸೇರಿದಂತೆ ವಿವಿಧ ಕಲಾ ಪ್ರಕಾರಗಳು ಪ್ರದರ್ಶನಗೊಳ್ಳಲಿವೆ.
ಮೆರವಣಿಗೆಯ ನಂತರ, ಸಂಜೆ 5:30ಕ್ಕೆ ಸ್ಥಳೀಯ ಸ್ವಯಂ-ಸರ್ಕಾರ ಸಚಿವ ಕೆ.ಎಂ. ಶಾಜಿ ಅವರು ಸಮಾರೋಪ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ. ಸಂಜೆ 7ರಿಂದ ರಾತ್ರಿ 9.30 ರವರೆಗೆ ಸುರುಮಿ ವಯನಾಡ್ ಮತ್ತು ಅವರ ತಂಡದಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ.

