ಕಾಸರಗೋಡು: ಗಡಿನಾಡು ಕಾಸರಗೋಡು ಕನ್ನಡಭವನದ ರೂವಾರಿ, ಡಾ. ವಾಮನ್ ರಾವ್ ಬೇಕಲ್ ಇವರಿಗೆ ಮೈಸೂರಿನ ಪ್ರತಿಷ್ಠಿತ ಮುಖ್ಯಮಂತ್ರಿ ದಿ. ದೇವರಾಜ್ ಅರಸ್ ಇವರ ಹುಟ್ಟುಹಬ್ಬದ ಪ್ರಯುಕ್ತ ನೀಡುವ "ಧ್ವನಿ ಕೊಟ್ಟ ಧಣಿ "ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕನ್ನಡ ಚುಟುಕು ಸಾಹಿತ್ಯ ಪರಿಷತ್ ಸಂಸ್ಥಾಪಕ, ಚುಟುಕು ಬ್ರಹ್ಮ ಡಾ. ಎಮ್ ಜಿ. ಆರ್. ಅರಸ್ ಅಧ್ಯಕ್ಷರಾಗಿರುವ " ಅನ್ವೇಷಣಾ ಟ್ರಸ್ಟ್ "ಪ್ರಾಯೋಜಕತ್ವ ದಲ್ಲಿ ಕಾರ್ಯಕ್ರಮ ನಡೆದಿತ್ತು.
ಗಡಿನಾಡು ಕಾಸರಗೋಡಿನಲ್ಲಿ ಕನ್ನಡ ಭವನ ಮೂಲಕ ನಿರಂತರ ಕನ್ನಡ ಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅಖಿಲ ಕರ್ನಾಟಕ ವ್ಯಾಪ್ತಿಯಲ್ಲಿ ಖ್ಯಾತಿ ಹೊಂದಿದ, ಹಾಗೂ ಕರ್ನಾಟಕ ದಿಂದ ಕಾಸರಗೋಡು ಪ್ರದೇಶಕ್ಕೆ ಸಾಂಸ್ಕøತಿಕ ರಾಯಬಾರಿಗಳಾಗಿ, ಬರುವ ಕನ್ನಡ ಪ್ರೇಮಿಗಳಿಗೆ ಉಚಿತ ವಸತಿ ವ್ಯವಸ್ಥೆ, ಗ್ರಂಥಾಲಯ, ಉಚಿತ ವಾಚನಾಲಯ, ಅಶಕ್ತ ಲೇಖಕರ ಬರಹಗಳನ್ನು ಕೃತಿಗಳನ್ನಾಗಿಸಿ ಕವಿ, ಸಾಹಿತಿಗಳನ್ನು ಪ್ರೋತ್ಸಾಹಿಸುತ್ತಿರುವುದಲ್ಲದೆ, "ಕನ್ನಡ ಭವನ ಪ್ರಕಾಶನ " ವಿವಿಧ ಪ್ರಾಕಾರಗಳಲ್ಲಿ ಕನ್ನಡ ಸಮ್ಮೇಳನಗಳು, ವಿವಿಧ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸುವ ಮೂಲಕ ಡಾ. ವಾಮನರಾವ್ ಬೇಕಲ್ ಅವರ ಕನ್ನಡಪರ ಚಟುವಟಿಕೆ ಪರಿಗಣಿಸಿ ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು.


