HEALTH TIPS

ಮಕ್ಕಳಿಗೆ ಉಸಿರಾಟದ ತೊಂದರೆ, ಅನಂತಪುರದಲ್ಲಿ ಮುಗಿಯದ ಕೋಳಿ ತ್ಯಾಜ್ಯ ಕಾರ್ಖಾನೆಯ ಉಪಟಳ: ಸಾರ್ವಜನಿಕರ ಆಕ್ರೋಶ; 'ಪ್ರೆಶ್ ಕಟ್' ಮಾದರಿಯ ಪ್ರತಿಭಟನೆ ಬೇಕಾಗುವುದೇ?

ಕುಂಬಳೆ: ಪುತ್ತಿಗೆ ಗ್ರಾಮ ಪಂಚಾಯತಿಯ ಅನಂತಪುರ ಕೋಳಿ ತ್ಯಾಜ್ಯ ಕಾರ್ಖಾನೆ ('ಕೊಂಬನ್ ಲ್ಯೂಬ್ಸ್') ನಿಂದ ಸ್ಥಳೀಯರು ಮತ್ತು ನಿವಾಸಿಗಳು ತೀವ್ರ ದುರ್ವಾಸನೆಯಿಂದ ಬಳಲುತ್ತಿದ್ದಾರೆ. ಮಕ್ಕಳು, ವೃದ್ದರು ಕೆಮ್ಮು ಮತ್ತು ಉಸಿರಾಟದ ತೊಂದರೆಗಳನ್ನು ಎದುರಿಸುತ್ತಿದ್ದಾರೆ ಎಂದು ಸ್ಥಳೀಯರು ಕಾಲಗಳಿಂದ ದೂರುತ್ತಿದ್ದಾರೆ.


ಪ್ರತಿದಿನ ತಮ್ಮ ಮಕ್ಕಳೊಂದಿಗೆ ಆಸ್ಪತ್ರೆಗೆ ಹೋಗಿ ಬರಬೇಕಾಗಿರುವುದು ಸ್ಥಳೀಯರು ಮತ್ತು ಕ್ರಿಯಾ ಸಮಿತಿಯನ್ನು ಮತ್ತಷ್ಟು ಕೆರಳಿಸಿದೆ. ಪ್ರದೇಶದ ನಿವಾಸಿಗಳು ಆಹಾರವನ್ನು ತಯಾರಿಸಲು ಮತ್ತು ಸೇವಿಸಲು ಹೆಣಗಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕಾರ್ಖಾನೆಯಿಂದ ಹೊರಹೊಮ್ಮುವ ಹೊಗೆ ಮತ್ತು ದುರ್ವಾಸನೆಯು ಸ್ಥಳೀಯ ನಿವಾಸಿಗಳಲ್ಲಿ ವಾಂತಿ ಮತ್ತು ಅಲರ್ಜಿ ಸೇರಿದಂತೆ ಸಮಸ್ಯೆಗಳನ್ನು ಉಂಟುಮಾಡುತ್ತಿದೆ. ಹತ್ತಿರದ ಪ್ರದೇಶಗಳಲ್ಲಿ ಡಯಾಲಿಸಿಸ್ ರೋಗಿಗಳು ಸಹ ದುರ್ವಾಸನೆ ಮತ್ತು ಹೊಗೆಯಿಂದಾಗಿ ಉಸಿರಾಟದ ತೊಂದರೆಯನ್ನು ಎದುರಿಸುತ್ತಿದ್ದಾರೆ.

ಅಧಿಕಾರಿಗಳ ಹಸ್ತಕ್ಷೇಪ ಮತ್ತು ನಿರ್ಲಕ್ಷ್ಯ:

ಈ ಹಿಂದೆ, ಜನರು ಕಾರ್ಖಾನೆಯ ವಿರುದ್ಧ ಪ್ರತಿಭಟಿಸಿದಾಗ, ಜಿಲ್ಲಾಡಳಿತ, ಪುತ್ತಿಗೆ ಗ್ರಾಮ ಪಂಚಾಯತಿ ಮತ್ತು ಶಾಸಕ ಎಕೆಎಂ ಅಶ್ರಫ್ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು. ಪುತ್ತಿಗೆ ಗ್ರಾಮ ಪಂಚಾಯತಿ ಸ್ಟಾಪ್ ಮೆಮೊ ಹೊರಡಿಸಿತ್ತು. ಸ್ಥಳೀಯರು ಎತ್ತಿರುವ ಸಮಸ್ಯೆಗಳಿಗೆ ವೈಜ್ಞಾನಿಕ ಪರಿಹಾರವನ್ನು ಕಂಡುಕೊಂಡ ನಂತರ ಮತ್ತು ಮಾಲಿನ್ಯ ನಿಯಂತ್ರಣ ವ್ಯವಸ್ಥೆಗಳನ್ನು ಪರಿಣಾಮಕಾರಿಯಾಗಿ ಮಾಡಿದ ನಂತರವೇ ಕಾರ್ಖಾನೆಯನ್ನು ತೆರೆಯಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದ್ದರು.

ಮಾಲಿನ್ಯ ನಿಯಂತ್ರಣ ಮಂಡಳಿಯು ಇದಕ್ಕಾಗಿ ಪರಿಸರ ಎಂಜಿನಿಯರ್‍ಗೆ ನಿರ್ದೇಶನ ನೀಡಿತು. ಆದರೆ ಇದು ಪರಿಣಾಮಕಾರಿಯಾಗಿಲ್ಲ ಎಂದು ಸ್ಥಳೀಯರು ಆರೋಪಿಸುತ್ತಾರೆ. ಸಮಸ್ಯೆಯನ್ನು ಪರಿಹರಿಸಲು ಕಾರ್ಖಾನೆ ಅಧಿಕೃತರು ಯಾವುದೇ ಕ್ರಮಕ್ಕೆ ಈವರೆಗೂ ಮುಂದಾಗಿಲ್ಲ. ಅಧಿಕಾರಿಗಳೊಂದಿಗೆ ಮಾತನಾಡಲು ಹೋದಾಗ, ತಾವು ಏನು ಬೇಕಾದರೂ ಮಾಡಬಹುದು ಎಂಬ ಧಿಕ್ಕಾರದ ಪ್ರತಿಕ್ರಿಯೆಯನ್ನು ನೀಡುತ್ತಿದ್ದಾರೆ ಎಂದು ಸ್ಥಳೀಯರು ಹೇಳುತ್ತಾರೆ.

'ಫ್ರೆಶ್ ಕಟ್' ಮಾದರಿಯ ಪ್ರತಿಭಟನೆ:

ಕಾರ್ಖಾನೆ ಮಾಲೀಕರು ಅಧಿಕಾರಿಗಳು ನೀಡಿದ ಯಾವುದೇ ಭರವಸೆಗಳನ್ನು ಈಡೇರಿಸಲು ಸಿದ್ಧರಿಲ್ಲದಿದ್ದರೆ, ಓಣಂ ಆಚರಣೆಯ ನಂತರ ದೊಡ್ಡ ಪ್ರಮಾಣದ ಸಭೆ ನಡೆಸಿ ಸಾಮೂಹಿಕ ಪ್ರತಿಭಟನೆ ನಡೆಸಲು ಸ್ಥಳೀಯರು ಮತ್ತು ಕ್ರಿಯಾ ಸಮಿತಿ ನಿರ್ಧರಿಸಿದೆ. ಕೋಝಿಕ್ಕೋಡ್‍ನ ತಾಮರಸ್ಸೇರಿಯಲ್ಲಿ 'ಫ್ರೆಶ್ ಕಟ್' ಸ್ಥಾವರ ಮಾದರಿಯಲ್ಲಿ ಪ್ರತಿಭಟನೆ ಆಯೋಜಿಸುವ ಯೋಜನೆ ಇದೆ.

ಸಾವಿರಾರು ಕುಟುಂಬಗಳ ನಿದ್ರೆ ಕಸಿದುಕೊಂಡಿದ್ದ ತಾಮರಸ್ಸೇರಿಯಲ್ಲಿರುವ ಕೋಳಿ ಕಸಾಯಿಖಾನೆ ತ್ಯಾಜ್ಯ ಸಂಸ್ಕರಣಾ ಘಟಕವನ್ನು ಮುಚ್ಚಲು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶ ಹೊರಡಿಸಿತ್ತು. ಆರು ವರ್ಷಗಳಿಂದ ನಡೆಯುತ್ತಿದ್ದ ಸ್ಥಳೀಯರ ಪ್ರತಿಭಟನೆಗೆ ಇದು ಜಯವಾಗಿದೆ. ಆದಾಗ್ಯೂ, ಹೈಕೋರ್ಟ್ ಮುಚ್ಚುವ ಆದೇಶಕ್ಕೆ ತಾತ್ಕಾಲಿಕ ತಡೆ ನೀಡಿದ ನಂತರ, ಅಲ್ಲಿ ಸಾಮೂಹಿಕ ಪ್ರತಿಭಟನೆ ಮತ್ತೆ ಆರಂಭವಾಗಿದೆ.

ಶಾಸಕರು ಮತ್ತು ಇತರರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ, ಸ್ಥಳೀಯರು ಕಾರ್ಖಾನೆಗೆ ತ್ಯಾಜ್ಯ ಸಾಗಿಸುವ ವಾಹನಗಳನ್ನು ತಡೆಯುತ್ತಿದ್ದಾರೆ. ಅನಂತಪುರಂನಲ್ಲಿಯೂ ಇದೇ ರೀತಿಯ ಸಾಮೂಹಿಕ ಪ್ರತಿಭಟನೆಗಳನ್ನು ಆಯೋಜಿಸಲು ಕ್ರಿಯಾ ಸಮಿತಿ ಮತ್ತು ಸ್ಥಳೀಯರು ನಿರ್ಧರಿಸಿದ್ದಾರೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries