ಬದಿಯಡ್ಕ: ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ಏಳ್ಕಾನ ಸನಿಹದ ಬಾಳೆಗಳಿ ನಿವಾಸಿ ಪಾರ್ವತಿ (73) ಎಂಬವರ ಮನೆ ಬಾಗಿಲು ಒಡೆದು ನುಗ್ಗಿದ 2 ಪವನ್ ಚಿನ್ನಾಭರಣ ಹಾಗೂ 50 ಸಾವಿರ ರೂಪಾಯಿ ದೋಚಿದ್ದಾರೆ. ಪಾರ್ವತೀ ಅವರ ಪುತ್ರಿ ನೀಲೇಶ್ವರದಲ್ಲಿ ವೈದ್ಯರಾಗಿದ್ದು, ಇವರು ರಾತ್ರಿ ವೇಳೆ ಆಹಾರ ಸೇವಿಸಿ ಸನಿಹದ ತರವಾಡು ಮನೆಗೆ ವಾಸ್ತವ್ಯಕ್ಕಾಗಿ ತೆರಳುತ್ತಿದ್ದರು. ಎಂದಿನಂತೆ ತರವಾಡು ಮನೆಗೆ ತೆರಳಿ, ಮರುದಿನ ಬೆಳಗ್ಗೆ ಮನೆಗೆ ಆಗಮಿಸಿದಾಗ ಕಳವು ಬೆಳಕಿಗೆ ಬಂದಿದೆ. ಮನೆಯೊಳಗಿನ ಕಪಾಟಿನಲ್ಲಿರಿಸಿದ್ದ ಬಟ್ಟೆ ಚಲ್ಲಾಪಿಲ್ಲಿಗೊಳಿಸಿದ್ದು, ತಪಾಸಣೆ ನಡೆಸಿದಾಗ ಎರಡು ಪವನು ಚಿನ್ನ ಹಾಗೂ 50ಸಾವಿರ ರೂ. ನಗದು ಕಳವಾಗಿತ್ತು. ಈ ಬಗ್ಗೆ ಪೊಲೀಸರು ಕೇಸುದಾಖಲಿಸಿಕೊಂಡಿದ್ದು, ಸ್ಥಳಕ್ಕಾಗಮಿಸಿ ಮಾಹಿತಿ ಸಂಗ್ರಹಿಸಿದ್ದಾರೆ.


