ನವದೆಹಲಿ: ಉಪರಾಷ್ಟ್ರಪತಿ ಹಾಗೂ ರಾಜ್ಯಸಭೆಯ ಸಭಾಪತಿ ಸಿ.ಪಿ.ರಾಧಾಕೃಷ್ಣನ್ ಅವರು ಹಲವಾರು ರಾಜ್ಯಸಭಾ ಸದಸ್ಯರನ್ನು ಪ್ರಮುಖ ಸಂಸದೀಯ ಸಮಿತಿಗಳ ಸದಸ್ಯರು ಮತ್ತು ಅಧ್ಯಕ್ಷರನ್ನಾಗಿ ನಾಮನಿರ್ದೇಶನ ಮತ್ತು ಮರು-ನಾಮನಿರ್ದೇಶನ ಮಾಡಿದ್ದಾರೆ.
ಮೇಲ್ಮನೆಯಲ್ಲಿ ಶಾಸಕಾಂಗ ಮತ್ತು ನೀತಿ ವಿಷಯಗಳನ್ನು ಪರಿಶೀಲಿಸುವ ಸಂಸದೀಯ ಸಮಿತಿಗಳ ಕಾರ್ಯನಿರ್ವಹಣೆಯನ್ನು ಬಲಪಡಿಸುವ ಉದ್ದೇಶದಿಂದ ಈ ನೇಮಕಾತಿಗಳನ್ನು ಮಾಡಲಾಗಿದೆ.
ಕಲಾಪ ಸಲಹಾ ಸಮಿತಿ: ಸ್ಯಾಮ್ ಸತೀಶ್ ಬಾಬು
ನಿಯಮಗಳ ಸಮಿತಿ: ಡಾ.ಲಕ್ಷ್ಮೀಕಾಂತ್ ಬಾಜಪಾಯಿ ಮತ್ತು ಸುಖೇಂದು ಶೇಖರ್ ರಾಯ್
ವಿಶೇಷ ಹಕ್ಕುಗಳ ಸಮಿತಿ: ತರುಣ್ ಛುಗ್, ಮಿಥಿಲೇಶ್ ಕುಮಾರ್, ಡಾ.ಭೀಮ್ ಸಿಂಗ್, ಅಖಿಲೇಶ್ ಪ್ರಸಾದ್ ಸಿಂಗ್ ಮತ್ತು ತಿರುಚ್ಚಿ ಶಿವ
ಎಸ್ಸಿ/ಎಸ್ಟಿ ಕಲ್ಯಾಣ ಸಮಿತಿ: ಎಸ್. ಕಲ್ಯಾಣಸುಂದರಂ, ಮಸ್ತಾನ್ ರಾವ್ ಯಾದವ್ ಬೀಧಾ ಮತ್ತು ಎಲ್.ಕೆ. ಸಿಧೀಶ್
ಸರಕಾರಿ ಭರವಸೆಗಳ ಸಮಿತಿ: ಹರೀಶ್ ಬೀರನ್ ಮತ್ತು ರಾಜೀವ್ ಶುಕ್ಲಾ
ಅಧೀನ ಶಾಸನ ಸಮಿತಿ: ಸುಶ್ಮಿತಾ ದೇವ್, ಚುನ್ನಿಲಾಲ್ ಗರಾಸಿಯಾ, ಸ್ವಾತಿ ಮಲಿವಾಲ್, ಹರ್ಷ್ ಮಹಾಜನ್, ನೀರಜ್ ಡಾಂಗಿ ಮತ್ತು ಐ.ಎಸ್.ಇನ್ಬದುರೈ
ಮಂಡಿಸಿದ ಕಾಗದಪತ್ರಗಳ ಸಮಿತಿ: ಎಂ.ನಾಗರಾಜ, ಮಾನಸಿಂಹ ಮೇರಾಮನ್ ಪರ್ಮಾರ್, ಡಾ.ಅಜಿತ್ ಮಾಧವರಾವ್ ಗೋಪ್ಚಾಡೆ, ಖಿಯಾಂಗ್ತೆ ಲಾಲ್ಟುಂಗ್ಕಿಮ್ ಮತ್ತು ಜೇಮ್ಸ್ ಪಂಗ್ಸಾಂಗ್ ಕೊಂಗಕಲ್ ಸಂಗ್ಮಾ
ನೈತಿಕ ಸಮಿತಿ: ಎಸ್.ಆರ್. ಶಿವಲಿಂಗಂ, ಸಂಜಯ್ ಸೇಠ್ ಮತ್ತು ಮಾನಸ್ ರಂಜನ್ ಮಂಗರಾಜ್
ಸಂಸತ್ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ ಸಮಿತಿ: ಡಾ. ಜಾನ್ ಬ್ರಿಟ್ಟಾಸ್, ಜೋಸ್ ಕೆ. ಮಣಿ ಮತ್ತು ಉಪೇಂದ್ರ ಕುಶ್ವಾಹ
ರಾಧಾಕೃಷ್ಣನ್ ಅವರು ಸಾರ್ವಜನಿಕ ಉದ್ದೇಶಗಳ ಸಮಿತಿ ಹಾಗೂ ಉಪಾಧ್ಯಕ್ಷರ ಸಮಿತಿಗೂ ಸದಸ್ಯರನ್ನು ನಾಮನಿರ್ದೇಶನ ಮತ್ತು ಮರು-ನಾಮನಿರ್ದೇಶನ ಮಾಡಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯಸಭೆಯಲ್ಲಿ ವಿಪಕ್ಷ ನಾಯಕರಾಗಿ ಮರು-ನಾಮನಿರ್ದೇಶನಗೊಂಡಿದ್ದಾರೆ ಮತ್ತು ಡಾ. ಎಂ.ತಂಬಿದುರೈ ಅವರನ್ನು ಉಪಾಧ್ಯಕ್ಷರ ಸಮಿತಿಗೆ ನಾಮನಿರ್ದೇಶನ ಮಾಡಲಾಗಿದೆ.
ಮುಕುಲ್ ವಾಸ್ನಿಕ್, ತಿರುಚ್ಚಿ ಶಿವ, ಡಾ.ಮೇಧಾ ವಿಶ್ರಾಮ್ ಕುಲಕರ್ಣಿ, ಡಾ.ಕೆ.ಲಕ್ಷ್ಮಣ್, ರಾಘವ್ ಚಡ್ಡಾ ಮತ್ತು ರಂಜಿತ್ ರಂಜನ್ ಅವರನ್ನು ವಿವಿಧ ಸಂಸದೀಯ ಸ್ಥಾಯಿ ಸಮಿತಿಗಳ ಅಧ್ಯಕ್ಷರಾಗಿ ನಾಮನಿರ್ದೇಶನ ಹಾಗೂ ಮರು-ನಾಮನಿರ್ದೇಶನ ಮಾಡಲಾಗಿದೆ. ಮಾನಸ್ ರಂಜನ್ ಮಂಗರಾಜ್ ಅವರನ್ನು ಮಾನ್ಯತೆ ಪಡೆದ ಪಕ್ಷದ ನಾಯಕರನ್ನಾಗಿ ನಾಮನಿರ್ದೇಶನ ಮಾಡಲಾಗಿದೆ.

