No title
0
December 01, 2017
ಛಾಯಾ ಚಿತ್ರ ಪ್ರದರ್ಶನ, ಡಂಗುರ ಮೆರವಣಿಗೆ
ಕಾಸರಗೋಡು: ಆಲ್ ಕೇರಳ ಫೊಟೋಗ್ರಾಫಸರ್್ ಅಸೊಸಿಯೇಶನ್ನ 33 ನೇ ಕಾಸರಗೋಡು ಜಿಲ್ಲಾ ಸಮ್ಮೇಳನದ ಅಂಗವಾಗಿ ಕಾಸರಗೋಡು ಹೊಸ ಬಸ್ ನಿಲ್ದಾಣ ಪರಿಸರದಲ್ಲಿ ಆರಂಭಗೊಂಡ `ಛಾಯಾ ಚಿತ್ರ ಪ್ರದರ್ಶನ'ವನ್ನು ಕಾಸರಗೋಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ.ಸೈಮನ್ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಸಂಚಾಲಕ ಸಿ.ಕೆ.ಜನಾರ್ಧನನ್ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಸಮ್ಮೇಳನದಂಗವಾಗಿ ಕಾಸರಗೋಡು ನಗರದಲ್ಲಿ ಡಂಗುರ ಮೆರವಣಿಗೆ ನಡೆಯಿತು. ಜಿಲ್ಲಾ ಅಧ್ಯಕ್ಷ ಹರೀಶ್ ಪಾಲಕುನ್ನು, ಕಾರ್ಯದಶರ್ಿ ಪ್ರಶಾಂತ್ ತೈಕಡಪ್ಪುರಂ, ಕೋಶಾಧಿಕಾರಿ ಕಲಾಧರನ್ ಪೆರಿಯ, ರಾಜ್ಯ ಸಮಿತಿ ಸದಸ್ಯ ಸುದರ್ಶನ್, ಎನ್.ಎ.ಭರತನ್, ನಿರ್ಮಲಾಕ್ಷ, ವಿಜಯನ್ ಶೃಂಗಾರ್, ರಮೇಶನ್ ಮಾವುಂಗಾಲ್, ವಾಸು ಎ, ಶರೀಫ್ ಮೊದಲಾದವರು ಮೆರವಣಿಗೆಗೆ ನೇತೃತ್ವ ನೀಡಿದರು.
ಜಿಲ್ಲಾ ಸಮ್ಮೇಳದಂಗವಾಗಿ ಆಯೋಜಿಸಿದ ಛಾಯಾಚಿತ್ರ ಸ್ಪಧರ್ೆಯಲ್ಲಿ ರಾಮಚಂದ್ರನ್ ಹರಿದ ಪ್ರಥಮ, ದೀಪೇಶ್ ಪುದಿಯಪುರಯಿಲ್ ದ್ವಿತೀಯ, ನಾಸರ್ ರಾಜಪುರಂ, ಸನ್ನಿ ಮಾಣಿಶ್ಶೇರಿ, ಶ್ರೀಜಿತ್ ನಿಲಾಯಿ ಪ್ರೋತ್ಸಾಹಕ ಬಹುಮಾನ ಪಡೆದರು. ವಿಡಿಯೋಗ್ರಾಫಿ ಸ್ಪಧರ್ೆಯಲ್ಲಿ ಬಾಬು ಜಾನ್ಸಿ ಪ್ರಥಮ, ವೈಶಾಖ್ ಮಾವುಂಗಲ್ ಪ್ರೋತ್ಸಾಹಕ ಬಹುಮಾನ ಪಡೆದರು.
ಸಂಚಾಲಕ ಕೆ.ಸುಧೀರ್ ಸ್ವಾಗತಿಸಿದರು. ಸುಕು ಸ್ಮಾಟರ್್ ವಂದಿಸಿದರು.