HEALTH TIPS

No title

ಮುಳಿಯಾರು ಶ್ರೀ ಸುಬ್ರಹ್ಮಣ್ಯ ಸ್ವಾಮೀ ಕ್ಷೇತ್ರದಲ್ಲಿ ಷಷ್ಠಿ ಮಹೋತ್ಸವವು ಸಂಪನ್ನವಾಯಿತು. ಮುಳ್ಳೇರಿಯ : ಮುಳಿಯಾರು ಶ್ರೀ ಸುಬ್ರಹ್ಮಣ್ಯ ಸ್ವಾಮೀ ಕ್ಷೇತ್ರದಲ್ಲಿ ಷಷ್ಠಿ ಮಹೋತ್ಸವವು ಬ್ರಹ್ಮಶ್ರೀ ಅರವತ್ ದಾಮೋದರ ತಂತ್ರಿಯವರ ನೇತೃತ್ವದಲ್ಲಿ ವಿವಿಧ ಧಾಮರ್ಿಕ ಸಾಂಸ್ಕೃತಿಕ ಸಮಾರಂಭಗಳೊಂದಿಗೆ ಸಂಪನ್ನವಾಯಿತು. ಅರವತ್ ಶ್ರೀ ಪದ್ಮನಾಭ ತಂತ್ರಿ ಅವರಿಂದ ವಿವಿಧ ಧಾಮರ್ಿಕ ಕಾರ್ಯಗಳು ಸಾಂಗವಾಗಿ ಜರಗಿದವು. ನೀಲೇಶ್ವರ ಗಂಗಾಧರ ಮಾರಾರ್ ಮತ್ತು ಬಳಗದವರಿಂದ ತಾಯಂಬಕ ಉಪಾಸನೆಯು ಭಕ್ತಿಯ ಅಂತರಿಕ್ಷವನ್ನುಂಟುಮಾಡಿತು. ರಾತ್ರಿ ಶ್ರೀ ಭೂತಬಲಿ, ಕೋಟೂರಿಗೆ ಕಟ್ಟೆ ಸವಾರಿಯಾಗಿ ಹಿಂದುರಿಗಿ ಬಂದ ಬಳಿಕ ಕಟ್ಟೆಪೂಜೆ, ರಾಜಾಂಗಣದಲ್ಲಿ ನೃತ್ಯಸೇವೆ ಇವು ಜರಗಿದವು. ಉತ್ಸವದ ಅಂಗವಾಗಿ ಶ್ರೀ ದುಗರ್ಾಪರಮೇಶ್ವರಿ ಯಕ್ಷಗಾನ ಕಲಾ ಮಂಡಳಿ ಮಲ್ಲ ಇವರಿಂದ ಯಕ್ಷಗಾನ ಬಯಲಾಟ ಸೇವೆಯು ಜರಗಿತು. ದ್ವಿತೀಯ ದಿನ ದರ್ಶನ ಬಲಿ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ, ಮಧ್ಯಾಹ್ನ ಮಹಾ ಪೂಜೆ, ಮಂತ್ರಾಕ್ಷತೆ ಮತ್ತು ಪ್ರಸಾದ ಭೋಜನ ಜರಗಿದವು. ಮಧ್ಯಾಹ್ನ ವಿಷ್ಣುಮೂತರ್ಿ ದೈವಕೋಲವು ಜರಗಿ ದೈವಾರಾಧನೆ ಸಂಪನ್ನವಾಯಿತು. ಶ್ರೀ ಗಿರೀಶ ಅಡಿಗ ಕುಂಬಳೆ ಅವರಿಂದ ದೇವರ ನೃತ್ಯ ಮತ್ತು ಶ್ರೀ ಕೃಷ್ಣ ಹೊಳ್ಳ ಬಾರೆ ಇವರಿಂದ ದರ್ಶನಬಲಿ ಜರಗಿದವು. ರಾತ್ರಿ ರಂಗಪೂಜೆ ನೆರವೇರಿತು. ಬಳಿಕ ಕೊಲ್ಲಂಗಾನ ಶ್ರೀ ದುಗರ್ಾಪರಮೇಶ್ವರಿ ಯಕ್ಷಗಾನ ಮಂಡಳಿ ಮತ್ತು ಯಕ್ಷಬಳಗ ಮುಳಿಯಾರು ಇವರ ಸಹಯೋಗದಲ್ಲಿ ವೇಣುಗೋಪಾಲ ತತ್ವಮಸಿ ಪ್ರಾಯೋಜಕತ್ವದಲ್ಲಿ ಶ್ರೀ ದೇವೀ ಕಾರುಣ್ಯ ಪುಣ್ಯ ಕಥಾಭಾಗದ ಯಕ್ಷಗಾನ ಬಯಲಾಟವು ಯಶಸ್ವಿಯಾಯಿತು. ಯು ಎ ಇ ಬಳಗ ಮುಳಿಯಾರು, ಕುರುಕ್ಷೇತ್ರ ಯು ಎ ಇ ಮುಳಿಯಾರು, ಮತ್ತು ಊರವರ ಸಹಕಾರದಲ್ಲಿ ಅನ್ನ ಪ್ರಸಾದ ಭೋಜನ ವ್ಯವಸ್ಥೆ ಜರಗಿತು. ಕ್ಷೇತ್ರ ಪಾರಂಪರ್ಯ ಆಡಳಿತ ಮೊಕ್ತೇಸರರಾಗಿರುವ ಯನ್. ಸುಬ್ರಾಯ ಬಳ್ಳುಳ್ಳಾಯ ನೇತೃತ್ವವಹಿಸಿದರು. ಸೀತಾರಾಮ ಬಳ್ಳುಳ್ಳಾಯ ಸಮಾರಂಭ ನಿರ್ವಹಣೆ ಮಾಡಿದರು. ಅನಂತ ಪದ್ಮನಾಭ ಮಯ್ಯ ಅವರು ಸಾಂದಭರ್ಿಕ ಸಹಕಾರಗಳನ್ನಿತ್ತರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries