No title
0
December 01, 2017
ವಿಶೇಷ ಶಿಬಿರದ ಬಗ್ಗೆ ಮಾಹಿತಿ
ಮುಳ್ಳೇರಿಯ: ಮುಳ್ಳೇರಿಯ ಹೈಯರ್ ಸೆಕೆಂಡರಿ ಶಾಲೆಯ ಎನ್ಎಸ್ಎಸ್ ಘಟಕವು ಡಿಸಂಬರ್ ತಿಂಗಳಲ್ಲಿ ನಡೆಸುವ ಏಳು ದಿನಗಳ ವಿಶೇಷ ಶಿಬಿರದ ಬಗ್ಗೆ ನಿವೃತ್ತ ಪ್ರಾಂಶುಪಾಲ ಪ್ರೊ.ಎ.ಶ್ರೀನಾಥ್ ಅವರು ಮಾಹಿತಿಯನ್ನು ಸ್ವಯಂ ಸೇವಕರಿಗೆ ಇತ್ತೀಚೆಗೆ ನೀಡಿದರು.
ಶಿಬಿರವನ್ನು ನಡೆಸಲು ಪೂರ್ವಭಾವಿಯಾಗಿ ನಡೆಸಬೇಕಾದ ತಯಾರಿ, ಶಿಬಿರದಲ್ಲಿ ಕೈಗೊಳ್ಳುವ ಅಭಿವೃದ್ಧಿ ಕಾರ್ಯಗಳು, ವಿಶೇಷ ತರಗತಿಗಳು, ಮನರಂಜನಾ ಕಾರ್ಯಕ್ರಮಗಳು ಮೊದಲಾದ ವಿಚಾರಗಳನ್ನು ಸ್ವಯಂ ಸೇವಕರಿಗೆ ಮನದಟ್ಟು ಮಾಡಿಕೊಟ್ಟರು. ಶಾಲಾ ಪ್ರಾಂಶುಪಾಲ ಪಿ.ನಾರಾಯಣನ್, ಶಾಲಾ ಯೋಜನಾಧಿಕಾರಿ ಡಾ.ಶಶಿರಾಜ್ ನೀಲಂಗಳ, ಅಧ್ಯಾಪಕರಾದ ರಘುರಾಮ್ ಆಳ್ವ, ವಿನೋದ್ ಕುಮಾರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ರಸೀತ ಸ್ವಾಗತಿಸಿ, ರಚನಾ ವಂದಿಸಿದರು.