No title
0
November 27, 2017
ಭಾರತ-ಪಾಕಿಸ್ತಾನ ಪಂದ್ಯ ಕ್ರೀಡೆಯಷ್ಟೇ ಅಲ್ಲ; ಕ್ರಿಕೆಟ್ ಸರಣಿ ಕುರಿತು ಸಕರ್ಾರ ನಿರ್ಧರಿಸಬೇಕಿದೆ: ಎಂಎಸ್ ದೋನಿ
ಜಮ್ಮು-ಕಾಶ್ಮೀರ: ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಕ್ರೀಡೆಗಿಂತಲೂ ಹೆಚ್ಚಿನದು. ಸರಣಿಯಲ್ಲಿ ಪಾಲ್ಗೊಳ್ಳುವ ಸಂಬಂಧ ಸಕರ್ಾರವೇ ನಿರ್ಧರಿಸಬೇಕಿದೆ ಎಂದು ಭಾರತ ಕ್ರಿಕೆಟ್ ತಂಡದ ಆಟಗಾರ ಮಹೇಂದ್ರ ಸಿಂಗ್ ದೋನಿ ಅಭಿಪ್ರಾಯ ಪಟ್ಟಿದ್ದಾರೆ.
ಭಾನುವಾರ ಬಾರಾಮುಲ್ಲಾದ ಕುಂಜರ್ನಲ್ಲಿ ಸೇನೆ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗಿಯಾದರು. ಭೂ ಸೇನೆಯ ಲೆಫ್ಟಿನೆಂಟ್ ಕರ್ನಲ್ ಗೌರವ ಪದವಿ ಹೊಂದಿರುವ ದೋನಿ, ಆಟಗಾರರು ಹಾಗೂ ಸ್ಥಳೀಯರೊಂದಿಗೆ ಚಚರ್ೆ ನಡೆಸಿದರು.
ಭಾರತ-ಪಾಕಿಸ್ತಾನ ನಡುವೆ 2012-13ರ ನಂತರ ಏಕದಿನ ಮತ್ತು ಟಿ20 ಒಳಗೊಂಡ ಕ್ರಿಕೆಟ್ ಸರಣಿ ಆಯೋಜನೆಯಾಗಿಲ್ಲ. ಐಸಿಸಿ ಕಾರ್ಯಕ್ರಮಗಳ ಪ್ರಕಾರ ಎಲ್ಲ ಸದಸ್ಯ ರಾಷ್ಟ್ರಗಳು ಪರಸ್ಪರ ಪಂದ್ಯಗಳನ್ನು ಆಡಬೇಕು. ಭಾರತ ಪಾಕಿಸ್ತಾನದ ವಿರುದ್ಧದ ಪಂದ್ಯ ಆಡದಿದ್ದರೆ ಪಾಯಿಂಟ್ಗಳನ್ನು ಕಳೆದುಕೊಳ್ಳಲಿದೆ. ಆದರೆ, ಉಭಯ ರಾಷ್ಟ್ರಗಳ ನಡುವೆ ಪಂದ್ಯ ನಡೆಯುವ ನಿಧರ್ಾರ ಸಕರ್ಾರದ್ದು ಎಂದು ದೋನಿ ಪ್ರತಿಕ್ರಿಯಿಸಿದ್ದಾರೆ.
ಪಾಕಿಸ್ತಾನ ಕ್ರಿಕೆಟ್ ಮಂಡಳಿ ಹಾಗೂ ಬಿಸಿಸಿಐ ನಡುವಿನ ಒಪ್ಪಂದದ ಪ್ರಕಾರ, 2015?2023ರ ನಡುವೆ ಉಭಯ ರಾಷ್ಟ್ರಗಳು 6 ಸರಣಿಗಳಲ್ಲಿ ಆಡಬೇಕಿದೆ. ಗಡಿಯಲ್ಲಿ ಪಾಕಿಸ್ತಾನದಿಂದ ಅಪ್ರಚೋದಿತ ದಾಳಿಗಳ ನಂತರ ಭಾರತ ಪಾಕಿಸ್ತಾನ ಪ್ರವಾಸದಿಂದ ಹಿಂದೆ ಸರಿದಿದೆ.
ಪ್ರಸ್ತುತ ಭಾರತ ಕ್ರಿಕೆಟ್ ತಂಡ ಶ್ರೀಲಂಕಾ ವಿರುದ್ಧದ ಟೆಸ್ಟ್ ಕ್ರಿಕೆಟ್ ಆಡುತ್ತಿದ್ದು, ದೋನಿ ಕಾಶ್ಮೀರದಲ್ಲಿ ಸ್ಥಳೀಯ ಕ್ರಿಕೆಟಿಗರೊಂದಿಗೆ ಸಂವಾದ ಹಾಗೂ ಮಾರ್ಗದರ್ಶನದಲ್ಲಿ ತೊಡಗಿದ್ದಾರೆ.