ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 26, 2017
ಬದಿಯಡ್ಕ ನ.29ರಂದು `ಕೊಳ್ಳಿಮುಹೂರ್ತ'
ಬದಿಯಡ್ಕ: ಬೋಳುಕಟ್ಟೆ ಶ್ರೀ ವಿಷ್ಣುಮೂತರ್ಿ ನಗರದಲ್ಲಿ 2018 ಎಪ್ರಿಲ್ ತಿಂಗಳಿನಲ್ಲಿ ನಡೆಯಲಿರುವ ಶ್ರೀ ವಿಷ್ಣುಮೂತರ್ಿ ದೈವದ ಕೆಂಡಸೇವೆ ಮಹೋತ್ಸವದ ಪೂರ್ವಭಾವಿಯಾಗಿ ನ.29ರಂದು `ಕೊಳ್ಳಿಮುಹೂರ್ತ' ನಡೆಯಲಿರುವುದು.
ಅಂದು ಬೆಳಿಗ್ಗೆ ವಳಮಲೆ ವಿಷ್ಣುಮೂತರ್ಿ ದೈವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆಯ ನಂತರ ಬದಿಯಡ್ಕದಲ್ಲಿರುವ ಡಾ.ಎಸ್.ಎಸ್.ಭಟ್ ಅವರ ಕ್ಲಿನಿಕ್ ಸಮೀಪದಲ್ಲಿರುವ ಲಕ್ಷ್ಮೀ ತಿಮ್ಮಪ್ಪು ಚೆಟ್ಟಿಯಾರ್ ಅವರ ಸ್ಥಳದಲ್ಲಿ ಬೆಳಿಗ್ಗೆ 9 ಕ್ಕೆ ಕೊಳ್ಳಿ ಕಡಿದು ಮುಹೂರ್ತ ನೆರವೇರಿಸಿ, ವಾದ್ಯಘೋಷದೊಂದಿಗೆ ಮೆರವಣಿಗೆಯಲ್ಲಿ ಬೋಳುಕಟ್ಟೆ ವಿಷ್ಣುಮೂತರ್ಿ ನಗರಕ್ಕೆ ತಲುಪಿಸಲಾಗುವುದು. ಈ ಸಂದರ್ಭದಲ್ಲಿ ಭಗವದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಸಂಬಂಧಪಟ್ಟವರು ತಿಳಿಸಿರುತ್ತಾರೆ.


