HEALTH TIPS

ಯಾವುದೇ ಶೀರ್ಷಿಕೆಯಿಲ್ಲ

ಭೋಪಾಲ್ ಅನಿಲ ದುರಂತಕ್ಕೆ 33ರ ಕಹಿ ನೆನಪು, ಕಲ್ಯಾಣ ಕನಸು ಮಧ್ಯಪ್ರದೇಶದ ಭೋಪಾಲ್ ನಗರದ ಯೂನಿಯನ್ ಕಾಬರ್ೈಡ್ ಕಂಪನಿಯ ಕಾಖರ್ಾನೆಯಲ್ಲಿ ಡಿಸೆಂಬರ್ 3, 1984ರಲ್ಲಿ ಸಂಭವಿಸಿದ ಅನಿಲ ಮಹಾದುರಂತದ ಕಹಿನೆನಪಿಗೆ 33 ವರ್ಷ ಸಂದಿದೆ. ಆ ಪೋರ ತೋರಿದ ಕಾಳಜಿ ಪ್ರಧಾನಿ ತೋರಿದ್ದರೆ? ಈ ದುರಂತದಿಂದ ಸುಮಾರು 5 ಲಕ್ಷ ಜನ, ಅಂದರೆ ಭೋಪಾಲದ ಅರ್ಧದಷ್ಟು ಜನಸಂಖ್ಯೆ, ಅನೇಕ ಬಗೆಯ ಅಂಗವಿಕಲತೆಗಳು ಹಾಗೂ ಅನಾರೋಗ್ಯಪೀಡಿತರಾಗಿ, ಉಸಿರಾಡುವ ಶವಗಳಂತೆ ಆಗಿದ್ದಾರೆ. ಭೋಪಾಲ್ ದುರಂತ ನಮ್ಮನ್ನು ಎಚ್ಚರಿಸುವುದೆಂದು? ಭಾರತದ ಇತಿಹಾಸದಲ್ಲೊಂದು ಮರೆಯಲಾರದ ಅನಾಹುತಗಳಲ್ಲಿ ಒಂದೆನಿಸಿರುವ ಭೋಪಾಲ್ ಅನಿಲ ದುರಂತಕ್ಕೆ ಕಾರಣವಾದ ಯೂನಿಯನ್ ಕಾಬರ್ೈಡ್ ಕಂಪನಿಯ ಮಾಜಿ ಸಿಇಒ ವಾರೆನ್ ಆಂಡರ್ಸನ್ ನಿಧನರಾಗಿ ಮೂರು ವರ್ಷಗಳು ಕಳೆದಿವೆ. 1989ರಲ್ಲಿ ಯೂನಿಯನ್ ಕಾಬರ್ೈಡ್ ಸಂಸ್ಥೆ ಸಂತ್ರಸ್ತರಿಗೆ 470 ಯುಎಸ್ ಡಾಲರ್ ಪರಿಹಾರ ಮೊತ್ತವನ್ನು ಭಾರತ ಸಕರ್ಾರಕ್ಕೆ ನೀಡಿ ಕೇಸಿನಿಂದ ಖುಲಾಸೆಗೊಳಿಸುವಂತೆ ಕೋರಿತ್ತು. ಅದರೆ, ಜನ ಸಾಮಾನ್ಯರ ಮನಸ್ಸಿನಿಂದ ಭೋಪಾಲ್ ಮಹಾದುರಂತ ಎಂದಿಗೂ ಅಳಿಸುವುದಿಲ್ಲ. 1984ರ ಭೋಪಾಲ್ ಅನಿಲ ದುರಂತ 1984ರ ಡಿಸೆಂಬರ್ 2-3 ಸಂಭವಿಸಿದ್ದ ಭೋಪಾಲ್ ಅನಿಲ ದುರಂತಕ್ಕೆ ಯೂನಿಯನ್ ಕಾಬರ್ೈಡ್ ಕಂಪನಿ ಕಾರಣವಾಗಿತ್ತು. 42 ಟನ್ ವಿಷಾನಿಲ (ಮಿಥೈಲ್ಐಸೋ ಸೈನೇಟ್ ಒಅ) ವಾತಾವರಣದಲ್ಲಿ ಸೇರಿಕೊಂಡ ಪರಿಣಾಮವಾಗಿ, ಈ ಕಾಖರ್ಾನೆಯ ಸುತ್ತಲಿನ ಕೊಳಚೆ ಪ್ರದೇಶಗಳಲ್ಲಿದ್ದ ಸುಮಾರು 3,800 ಜನ ತಕ್ಷಣ ಅಸುನೀಗಿದರೆ, ನಂತರದ ಎರಡು ದಶಕಗಳಲ್ಲಿ ಈ ಸೋರುವಿಕೆಯ ಪರಿಣಾಮವಾಗಿ 20,000 ಜನ ಸತ್ತ ವರದಿಯಾಗಿದೆ. ಇದಲ್ಲದೆ, ಸುಮಾರು 5 ಲಕ್ಷ ಜನ, ಶಾಶ್ವತ ಅಂಗವಿಕಲರಾಗಿದ್ದಾರೆ. ಚಿತ್ರದಲ್ಲಿ :ವಾರೆನ್ ಆಂಡರ್ಸನ್ ಮದುವೆ, ಜೀವನ ಎಲ್ಲವೂ ಕನಸು ದುರಂತದಲ್ಲಿ ಕುಟುಂಬದ ಅರ್ಧದಷ್ಟು ಮಂದಿಯನ್ನು ಕಳೆದುಕೊಂಡ ರಾಮಸ್ವರೂಪ್ ಸಾಹು (46) ಕಷ್ಟಪಟ್ಟು ಹೆಜ್ಜೆಗಳನ್ನು ಇಡಬಲ್ಲರು. ಕಿರಿಯ ಸೋದರ ಮುಕೇಶ್ (35) ಮದುವೆಯಾಗುವ ಬಯಕೆಯಲ್ಲಿ ಕಾಲದೂಡುತ್ತಿದ್ದಾರೆ. ಮುಕೇಶ್ ರೀತಿಯಲ್ಲಿ ಇಲ್ಲಿನ ಅನೇಕ ಯುವಕರಿಗೆ ಮದುವೆ ಭಾಗ್ಯ ಇಲ್ಲದ್ದಂತಾಗಿದೆ. ಮದುವೆಯಾದವರು ಕೂಡಾ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಊರು ತುಂಬಾ ಇದೇ ಸಮಸ್ಯೆ ರಾಮಸ್ವರೂಪ್ ಅವರ ನೆರೆ ಮನೆಯಾತ ಸಂಜಯ್ ಯಾದವ್ ಅವರ 21 ವರ್ಷ ಮಗಳು ಯೋಗಿತಾಳಿಗೆ ಗಂಡು ಹುಡುಕುತ್ತಿದ್ದಾರೆ. ಯಾದವ್ ಅವರ ಉಳಿದ ಮಕ್ಕಳ ಪೈಕಿ ವಿಕಾಸ್ (18) ಹಾಗೂ ಅಮಾನ್ (16) ಇಬ್ಬರೂ ಮಾನಸಿಕ ಅಸ್ವಸ್ಥರಾಗಿದ್ದಾರೆ. ಕಿರಿಯ ಪುತ್ರಿ ವಂದನಾಳಿಗೆ ಋತುಚಕ್ರದ ಸಮಸ್ಯೆ ಇದೆ. ಯೋಗಿತಾಳನ್ನು ವಧುವಾಗಿ ಸ್ವೀಕರಿಸಲು ನೆರೆ ಮನೆಯವರೇ ಸಿದ್ಧರಿಲ್ಲ. ಸಾಮೂಹಿಕ ರೋಗ ರುಜಿನ ಪೀಡಿತರು ಸಾಂಕ್ರಾಮಿಕ ರೋಗ ರುಜಿನ ಪೀಡಿತರ ನೆರವಿಗಾಗಿ ಸ್ವತಃ ಸಂತ್ರಸ್ತೆಯಾಗಿರುವ ಚಂಪಾದೇವಿ ಶುಕ್ಲಾ ಅವರು ಚಿಂಗಾರಿ ಎಂಬ ಹೆಸರಿನಲ್ಲಿ ಟ್ರಸ್ಟ್ ನಡೆಸುತ್ತಿದ್ದಾರೆ. ಭವಿಷ್ಯದಲ್ಲಿ ಮಕ್ಕಳಿಗೆ ರೋಗದ ಸಮಸ್ಯೆ ಬರುವ ಭೀತಿಯಿಂದ ಅನೇಕರು ಮದುವೆಯಾಗುವ ಧೈರ್ಯ ಮಾಡುತ್ತಿಲ್ಲ. ಪೀಳಿಗೆಯಿಂದ ಪೀಳಿಗೆಗೆ ಇದು ನಡೆದುಕೊಂಡು ಬಂದಿದೆ. ಮದುವೆಯಾದವರು ಕಾಯಿಲೆ ಬೀಳುತ್ತಿದ್ದಂತೆ ಬೀದಿಗೆ ಹಾಕಲಾಗುತ್ತಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries