HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                    ಶಬರಿಮಲೆ ಅಯ್ಯಪ್ಪನ ಸನ್ನಿಧಾನಕ್ಕೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಭೇಟಿ?
     ಕುಂಬಳೆ: ಶಬರಿಮಲೆ ಅಯ್ಯಪ್ಪ ದೇವಾಲಯಕ್ಕೆ ಮಹಿಳೆಯರ ಪ್ರವೇಶ ನಿರ್ಬಂಧಿಸುವ ಸಂಪ್ರದಾಯಕ್ಕೆ ಬೆಂಬಲ ಸೂಚಿಸಿ ಅಯ್ಯಪ್ಪ ಭಕ್ತರ ಪರ ನಿಂತಿರುವ ಭಾರತೀಯ ಜನತಾ ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಈಗ ತಾವೂ ಅಯ್ಯಪ್ಪನ ದರ್ಶನಕ್ಕೆ ಬಯಕೆ ವ್ಯಕ್ತಪಡಿಸಿರುವುದಾಗಿ ತಿಳಿದುಬಂದಿದೆ.
    ನವೆಂಬರ್ 17ರಿಂದ ಶಬರಿಮಲೆಯ ಈ ವರ್ಷದ ಮಂಡಲ ಪೂಜಾ ಕೈಂಕರ್ಯಗಳು ಪ್ರಾರಂಬವಾಗಲಿದೆ.ಈ ವೇಳೆ ಅಮಿತ್ ಶಾ ತಾವು ಬೆಟ್ಟದ ಮೇಲಿನ ಅಯ್ಯಪ್ಪಸ್ವಾಮಿ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸುವ ಯೋಜನೆ ಇದೆ ಎಂದು ತಿಳಿದುಬಂದಿದೆ.
  ಶಬರಿಮಲೆ ದೇವಾಲಯಕ್ಕೆ ಭೇಟಿ ನೀಡಬೇಕೆಂದು ಅಮಿತ್ ಶಾ ಬಯಸಿದ್ದಾರೆ. ಆದರೆ ಈ ಸಂಬಂಧ ಇನ್ನೂ ಅಂತಿಮ ನಿಧರ್ಾರ ತೆಗೆದುಕೊಳ್ಳಬೇಕಿದೆ ಎಂದು ಕೇರಳ ಬಿಜೆಪಿ ಹಿರಿಯ ನಾಯಕರು ಹೇಳಿದ್ದಾರೆ.
   ದೇವಾಲಯದ ಆವರಣಕ್ಕೆ 10-50 ವಯೋಮಾನದ ಮಹಿಳೆಯರ ಪ್ರವೇಶ ನಿಷೇಧವನ್ನು ಹಿಂಪಡೆಯುವ ಸುಪ್ರೀಂ ಆದೇಶ ಜಾರಿಗೆ ಮುಂದಾಗಿರುವ ಸಿಪಿಎಂ-ನೇತೃತ್ವ ಎಡರಂಗ ಪ್ರಜಾಸತ್ತಾತ್ಮಕ ಸಕರ್ಾರದ ನಿಧರ್ಾರದ ವಿರುದ್ಧ ಅಯ್ಯಪ್ಪ ಭಕ್ತರಿಗೆ ತನ್ನ ಸಂಪೂರ್ಣ ಬೆಂಬಲವನ್ನು ಬಿಜೆಪಿ ಘೋಸಿದೆ.
  ಶಬರಿಮಲೆ ಭಕ್ತಾದಿಗಳ ವಿರುದ್ಧ ಕೇರಳ ಸಕರ್ಾರ ತೆಗೆದುಕೊಂಡ ಕಟ್ಟುನಿಟ್ಟಿನ ಕ್ರಮಗಳ ಕುರಿತಂತೆ ಕಳೆದ ವಾರ ಕಣ್ಣೂರಿನಲ್ಲಿ ಮಾತನಾಡಿದ್ದ ಶಾ ಇದು  ತುತರ್ು ಪರಿಸ್ಥಿತಿಯನ್ನು ನೆನಪಿಸುವ ಆಡಳಿತ ಕ್ರಮ ಎಂದಿದ್ದರು. ಅಲ್ಲದೆ ಸಕರ್ಾರವು ಬೆಂಕಿಯೊಂದಿಗೆ ಸರಸವಾಡುತ್ತಿದೆ ಎಂದು ಆರೋಪಿಸಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries