HEALTH TIPS

ಯಾವುದೇ ಶೀರ್ಷಿಕೆಯಿಲ್ಲ

             ಮೇಧಾ ಸರಸ್ವತಿ ಯಾಗಕ್ಕೆ ಸಿದ್ಧತೆ
    ಮುಳ್ಳೇರಿಯ: ಮೇಧಾ ಸರಸ್ವತಿ ಯಾಗ ಮಾಡುವುದರಿಂದ ವಿದ್ಯಾಥರ್ಿಗಳಲ್ಲಿ ಶೈಕ್ಷಣಿಕ ಶಕ್ತಿ ವೃದ್ಧಿಸುತ್ತದೆ. ಬುದ್ದಿ ಚುರುಕಾಗಿ, ಮಕ್ಕಳ ಸರ್ವತೋಮುಖ ಏಳಿಗೆಗೆ ಸಹಕಾರಿಯಾಗುತ್ತದೆ. ಆದ್ದರಿಂದ ಇತರ ಎಲ್ಲಾ ಯಾಗಗಳಿಂದ ಪರಿಣಾಮದಲ್ಲಿ ಮೇಧಾ ಸರಸ್ವತಿ ಯಾಗ ಭಿನ್ನವಾಗಿದೆ ಎಂದು ವೇದಮೂತರ್ಿ ಪುರೋಹಿತ ನಾಗರಾಜ ಭಟ್ ಹೇಳಿದರು.
   ಅವರು ಇತ್ತೀಚೆಗೆ ಅಡೂರಿನ ವಿದ್ಯಾಭಾರತಿ ವಿದ್ಯಾಲಯದಲ್ಲಿ ನಡೆಯಲಿರುವ ನೂತನ ಶಾಲಾ ಕಟ್ಟಡದ ಉದ್ಘಾಟನೆ ಹಾಗೂ ಮೇಧಾ ಸರಸ್ವತಿ ಯಾಗದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
    ಯಾಗ ಸಮಿತಿ ಅಧ್ಯಕ್ಷ ಗಂಗಾಧರ ಕಾಂತಡ್ಕ ಅಧ್ಯಕ್ಷತೆ ವಹಿಸಿದ್ದರು. ಅಡೂರಿನ ವಿದ್ಯಾಭಾರತಿ ವಿದ್ಯಾಲಯದಲ್ಲಿ ನಾಗರಾಜ ಭಟ್ ನೇತೃತ್ವದಲ್ಲಿ ಡಿಸೆಂಬರ್ 27 ಹಾಗೂ 28ರಂದು ನೂತನ ಕಟ್ಟಡದ ಲೋಕಾರ್ಪಣೆ ಹಾಗೂ ಮೇಧಾ ಸರಸ್ವತಿ ಯಾಗ ನಡೆಯಲಿದೆ. ಸಭೆಯಲ್ಲಿ ವೇದಮೂತರ್ಿ ಹರೀಶ್ ಭಟ್ ಅವರು ಯಾಗದ ಮಹತ್ವದ ಕುರಿತು ಮಾತನಾಡಿದರು. ಸಭೆಯಲ್ಲಿ ಕಟ್ಟಡ ನಿಮರ್ಾಣ ಸಮಿತಿ ಅಧ್ಯಕ್ಷ ಸುಧಿರಾಜ್ ನಾಯಕ್, ಸಾಮಾಜಿಕ ಮುಖಂಡರಾದ ಸತ್ಯಪ್ರೇಮಾ ಭಾರಿತ್ತಾಯ, ಶಾರದಾದೇವಿ ಬೈತನಡ್ಕ, ಲಕ್ಷ್ಮಣ ಪೊನಾರಂ, ವೀಣಾ ರೈ, ಅಪ್ಪಕುಂಞ ಮಾಸ್ತರ್, ಅಪ್ಪಕುಂಞ ಗುರುಸ್ವಾಮಿ, ರಾಜೇಶ್ ನಾಯಕ್ ಮೊದಲಾದವರು ಭಾಗವಹಿಸಿದ್ದರು. ವೆಂಕಟ್ರಾಜ್ ಸ್ವಾಗತಿಸಿ, ಪ್ರದೀಪ್ ಬಳ್ಳಕ್ಕಾನ ವಂದಿಸಿದರು. ಬಾಲಸುಬ್ರಹ್ಮಣ್ಯ ಭಟ್ ಬೈತನಡ್ಕ ನಿರೂಪಿಸಿದರು. ಸಭೆಯಲ್ಲಿ ಶಾಲೆಯ ವಿದ್ಯಾಥರ್ಿಗಳ ಪೋಷಕರು, ಹಳೆ ವಿದ್ಯಾಥರ್ಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries