HEALTH TIPS

No title

            ವಿಶ್ವದ ಅತ್ಯಂತ ಎತ್ತರದ ಸದರ್ಾರ್ ವಲ್ಲಭ ಭಾಯ್ ಪಟೇಲ್ ರ 'ಏಕತಾ ಪ್ರತಿಮೆ' ಲೋಕಾರ್ಪಣೆ
   ಅಹಮದಾಬಾದ್: ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆಗಳಲ್ಲಿ ಒಂದಾದ ಸದರ್ಾರ್ ವಲ್ಲಭ ಭಾಯ್ ಪಟೇಲ್ ರ `ಏಕತಾ ಪ್ರತಿಮೆ'ಯನ್ನು ಬುಧವಾರ ಲೋಕಾರ್ಪಣೆ ಮಾಡಲಾಯಿತು.
   ಗುಜರಾತ್ ನ ಕೆವಾಡಿಯಾದ ನರ್ಮದಾ ತಟದಲ್ಲಿ ನಿಮರ್ಿಸಲಾಗಿರುವ ವಿಶ್ವದ ಅತ್ಯಂತ ಎತ್ತರದ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಿದರು. ದೇಶದ ಮೊದಲ ಉಪ ಪ್ರಧಾನಿ ಪಟೇಲ್ ಅವರು ಭಾರತದ ಏಕೀಕರಣದಲ್ಲಿ ನಿಣರ್ಾಯಕ ಪಾತ್ರವಹಿಸಿದ್ದರು. ಹೀಗಾಗಿ ಪ್ರತಿಮೆಗೆ `ಏಕತೆಯ ಪ್ರತಿಮೆ' ಎಂದು ನಾಮಕರಣ ಮಾಡಲಾಗಿದೆ. ಸದರ್ಾರ್ ಪಟೇಲ್ ಅವರ ಪ್ರತಿಮೆಯ ಮೂಲಕ ಪ್ರಧಾನಿ ಮೋದಿ ಅವರು ಮತ್ತೊಮ್ಮೆ `ಏಕೀಕರಣ'ದ ಸಂದೇಶ ಸಾರಿದ್ದಾರೆ.
   ಪ್ರಧಾನಿ ಮೋದಿ ಹಾಗೂ ಇತರ ಗಣ್ಯರು ಪ್ರತಿಮೆಗೆ ಕುಂಭಾಭಿಷೇಕ ಮಾಡುವ ಮೂಲಕ ಅದನ್ನು ಲೋಕಾರ್ಪಣೆ ಮಾಡಿದರು. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾಣಿ, ಉಪ ಮುಖ್ಯಮಂತ್ರಿ ನಿತಿನ್ ಪಟೇಲ್, ಮಧ್ಯ ಪ್ರದೇಶ ರಾಜ್ಯಪಾಲ ಆನಂದಿಬೆನ್ ಪಟೇಲ್ ಮುಂತಾದವರು ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
          ಐತಿಹಾಸಿಕ ಮತ್ತು ಸ್ಫೂತರ್ಿದಾಯಕ ಘಟನೆಗೆ ಸಾಕ್ಷಿಯಾಗುತ್ತಿರುವುದು ನನ್ನ ಸೌಭಾಗ್ಯ: ಪ್ರಧಾನಿ ಮೋದಿ
          ಇಡೀ ವಿಶ್ವಕ್ಕೇ ಏಕೀಕರಣದ ಶಕ್ತಿ  ಸಾರಿದ ಸದರ್ಾರ್ ಪಟೇಲರ ವಿಶ್ವದ ಅತೀ ಎತ್ತರದ ಪ್ರತಿಮೆ ಅನಾವರಣಕ್ಕೆ ಸಾಕ್ಷಿಯಾಗುತ್ತಿರುವುದು ನನ್ನ ಸೌಭಾಗ್ಯ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
   ಇದು ಜಗತ್ತಿನ ಅತಿ ಎತ್ತರದ ಪ್ರತಿಮೆ. ಇಡೀ ವಿಶ್ವಕ್ಕೆ ಮತ್ತು ನಮ್ಮ ಭವಿಷ್ಯದ ಜನಾಂಗಕ್ಕೆ ಸದರ್ಾರ್ ಪಟೇಲರ ಸಾಧನೆ ಸಾರಿ ಹೇಳುತ್ತೆ ಈ ಪ್ರತಿಮೆ. ದೇಶದ ಏಕತೆಯನ್ನು ಶಂಕಿಸುವವರಿಗೆ ಇದು ಉತ್ತರ ನೀಡುತ್ತದೆ ಎಂದು ಹೇಳಿದರು. ಸದರ್ಾರ್ ವಲ್ಲಭಭಾಯಿ ಪಟೇಲ್ ಅಮರ್ ರಹೇ ಎಂಬ ಘೋಷಣೆ ಕೂಗಿದರು. ದೇಶದ 'ಏಕತೆಗೆ ಜಿಂದಾಬಾದ್' ಎಂದು ಘೋಷಣೆ ಕೂಗಿದರು. ಈ ಐತಿಹಾಸಿಕ ಕ್ಷಣಕ್ಕೆ ದೇಶದ ಜನತೆಗೆ ಮೋದಿ ಅಭಿನಂದನೆ ಸಲ್ಲಿಸಿದರು.
    'ಏಕತಾ ಪ್ರತಿಮೆಯನ್ನು ಅನಾವರಣಗೊಳಿಸಿರುವುದು ಐತಿಹಾಸಿಕ ದಿನ. ಈ ದಿನವನ್ನು ಇತಿಹಾಸದಿಂದ ಅಳಿಸಲು ಎಂದಿಗೂ ಸಾಧ್ಯವಿಲ್ಲ. ಯಾವ ಭಾರತೀಯನೂ ಈ ಪುಣ್ಯದಿನವನ್ನು ಮರೆಯಲು ಸಾಧ್ಯವೇ ಇಲ್ಲ. ಕೌಟಿಲ್ಯರ ಚಾಣಕ್ಷತನ ಮತ್ತು ಶಿವಾಜಿಯ ಶೌರ್ಯಗಳ ಸಮ್ಮಿಲನ ಪಟೇಲರು. ಭಾರತದ ಏಕತೆಗಾಗಿ ಸದರ್ಾರ್ ಪಟೇಲರು ನಿರಂತರ ಶ್ರಮಿಸಿದ್ದಾರೆ. ಸಾಧಾರಣ ರೈತನ ಮಗ ಪಟೇಲರ ಸಾಧನೆ ಕಡಿಮೆ ಅಲ್ಲ. 500ಕ್ಕೂ ಹೆಚ್ಚು ಪ್ರಾಂತ್ಯಗಳಲ್ಲಿ ಭಾರತ ಹಂಚಿ ಹೋಗಿತ್ತು. ಭಾರತ ಮಾತೆಯನ್ನು ತುಂಡು ತುಂಡು ಮಾಡುವ ಕಾರ್ಯವನ್ನು ಅವರು ವಿಫಲಗೊಳಿಸಿದ್ದರು. ಭಾರತ ಇಬ್ಭಾಗವಾಗದಂತೆ ಪಟೇಲರು ಎಚ್ಚರ ವಹಿಸಿದ್ದರು ಇಂತಹ ಲೋಹ ಪುರುಷ ಸದರ್ಾರ್ ಪಟೇಲರಿಗೆ ನನ್ನ ನಮನಗಳು ಎಂದು ಮೋದಿ ಹೇಳಿದರು.
    ಸದರ್ಾರ್ ಪಟೇಲರ ಸಂಕಲ್ಪವಿಲ್ಲದೇ ಇದ್ದಲ್ಲಿ ನಾಗರಿಕ ಸೇವೆಗಳನ್ನು ಆರಂಭಿಸಲು ಕಷ್ಟಸಾಧ್ಯವಾಗುತ್ತಿತ್ತು. ನಾವು ಅಹಮದಾಬಾದ್ನಲ್ಲಿ ಅಭಿಯಾನ ಶುರು ಮಾಡಿದ ದಿನಗಳು ನೆನಪಾಗುತ್ತಿವೆ. ದೇಶದ ಲಕ್ಷಾಂತರ ಹಳ್ಳಿಗಳಿಂದ ಕೋಟ್ಯಂತರ ರೈತರು ಬೇಸಾಯದ ಉಪಕರಣಗಳ ಕಬ್ಬಿಣದ ತುಂಡುಗಳನ್ನು, ಕಬ್ಬಿಣದ ಕೃಷಿ ಉಪಕರಣಗಳನ್ನು ಕೊಟ್ಟರು. ಈ ಪ್ರತಿಮೆ ನಿಜವಾದ ಅರ್ಥದಲ್ಲಿ ದೇಶವನ್ನು ಬೆಸೆಯುವ ಪ್ರತಿಮೆಯಾಗಿದೆ. ಇದೀಗ ದೇಶದ ಜನರ ಕನಸು ಸಾಕಾರವಾಗಿದ್ದು, ಇದಕ್ಕಾಗಿ ವಿಶ್ವದೆಲ್ಲೆಡೆ ಇರುವ ದೇಶಪ್ರೇಮಿಗಳನ್ನು ನಾನು ಅಭಿನಂದಿಸುತ್ತೇನೆ. ಸದರ್ಾರ್ ಪಟೇಲರ ನೆನಪಿನಲ್ಲಿ ರಾಷ್ಟ್ರೀಯ ಏಕತಾ ದಿವಸ ಆಚರಿಸಲಾಗುತ್ತಿದೆ. ದೇಶದ ವಿವಿಧೆಡೆ ಭಾರತದ ಏಕತೆಯ ಘೋಷಣೆಗಳು ಮೊಳಗುತ್ತಿವೆ. ಭಾರತದ ಬಗ್ಗೆ ನಮಗಿರುವ ಭಾವನೆಗೆ ಸಾವಿರಾರು ವರ್ಷಗಳ ಆಧಾರವಿದೆ. ಭಾರತದ ಇತಿಹಾಸದಲ್ಲಿ ಈ ದಿನ ಅತ್ಯಂತ ಮಹತ್ವದ್ದು ಎಂದು ದಾಖಲಾಗುತ್ತದೆ ಎಂದು ಹೇಳಿದರು.
    ಭಾರತದ ಏಳ್ಗೆಗಾಗಿ ಸಮಪರ್ಿಸಿಕೊಂಡ ವಿರಾಟ ವ್ಯಕ್ತಿತ್ವಕ್ಕೆ ನಾವು ನಮಿಸುತ್ತಿದ್ದೇವೆ. ಇದಕ್ಕಾಗಿ ನಾವು ಇಷ್ಟು ವರ್ಷ ನಿರೀಕ್ಷಿಸಬೇಕಾಗಿದ್ದು ವಿಪಯರ್ಾಸ. ಇದು ನಮ್ಮ ದೇಶದ ಇತಿಹಾಸದಲ್ಲಿ ಸುವಣರ್ಾಕ್ಷರದಲ್ಲಿ ಬರೆದಿಡಬೇಕಾದ ದಿನವಾಗಿದ್ದು, ಭೂಮಿಯಿಂದ ಬಾನಿನವವರೆಗೆ ವ್ಯಾಪಿಸಿ ನಿಂತಿರುವ ಸದರ್ಾರ್ ಸಾಹೇಬರಿಗೆ ಅಭಿಷೇಕ ನಡೆಯುತ್ತಿದೆ. ದೇಶದ ಭವಿಷ್ಯಕ್ಕೆ ಗಗನಚುಂಬಿ ಆಧಾರ ನಮಗೆ ಸಿಕ್ಕಿದೆ. ಸದರ್ಾರ್ ಪಟೇಲರ ಇಂಥ ವಿಶಾಲ ಪ್ರತಿಮೆಯನ್ನು ದೇಶಕ್ಕೆ ಸಮಪರ್ಿಸುವ ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ ಎಂದು ಭಾವಿಸುತ್ತೇನೆ. ನಾನು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ನಾನು ಈ ಕಲ್ಪನೆ ಮಾಡಿದ್ದೆ. ನಾನು ಪ್ರಧಾನಿಯಾಗಿ ಈ ಪುಣ್ಯ ಕೆಲಸ ಮಾಡುವ ಅವಕಾಶ ಸಿಗುತ್ತೆ ಎಂದು ನಾನು ಅಂದುಕೊಂಡಿರಲಿಲ್ಲ. ಸದರ್ಾರರ ಆಶೀವರ್ಾದ, ದೇಶದ ಕೋಟಿಕೋಟಿ ಜನರ ಆಶೀವರ್ಾದದಿಂದ ಧನ್ಯನಾಗಿದ್ದೇನೆ ಎಂದು ಮೋದಿ ಹೇಳಿದರು.
   ಜೊತೆಗೆ ಗುಜರಾತ್ನ ಜನರು ಕೊಟ್ಟಿರುವ ಅಭಿನಂದನೆ ಪತ್ರಕ್ಕಾಗಿಯೂ ಗುಜರಾತ್ನ ಜನರಿಗೆ ನಾನು ಅಭಾರಿ. ತಾಯಿ ಮಗುವಿನ ಮೈದಡವಿದಾಗ ಮಗುವಿಗೆ ಹೊಸ ಉತ್ಸಾಹ ಸಿಗುತ್ತದೆ. ನೀವು ಕೊಟ್ಟ ಈ ಅಭಿನಂದನಾ ಪತ್ರದಿಂದ ನನ್ನಲ್ಲಿ ಇಂಥ ಅನುಭೂತಿ ಮೂಡುತ್ತಿದೆ. ಮತ್ತಷ್ಟು ಉತ್ತಮ ಕೆಲಸ ಮಾಡಬೇಕು ಎಂಬ ಹೊಸ ಉತ್ಸಾಹ ಮೂಡಿದೆ. ದೇಶದ ಭವಿಷ್ಯದ ಬಗ್ಗೆ ಘೋರ ನಿರಾಶೆ ಆವರಿಸಿದ್ದಾಗ, ದೇಶದ ಭೂಮಿ ನೂರಾರು ಹೋಳುಗಳಾಗಿ ತುಂಡುಗಳಾಗಿದ್ದಾಗ, ದೇಶದ ವೈವಿಧ್ಯತೆಯನ್ನೇ ಈ ದೇಶದ ಶಕ್ತಿ ಎಂದು ಸದರ್ಾರ್ ವಲ್ಲಭಬಾಯ್ ಪಟೇಲ್ ಸಾರಿ ಹೇಳಿದರು. ಪಟೇಲರ ಬಳಿ ಕೌಟಿಲ್ಯನ ಕುಟಿಲ ನೀತಿ, ಶಿವಾಜಿ ಮಹಾರಾಜರ ಕ್ಷಾತ್ರ ಬೆಸೆದುಕೊಂಡಿತ್ತು. ವಿದೇಶಿ ಆಕ್ರಮಣಕ್ಕಿಂತಲೂ ನಮ್ಮ ಒಳಜಗಳೇ ನಮಗೆ ದೊಡ್ಡ ಶತ್ರು ಎಂದು ಸದರ್ಾರ್ ಪಟೇಲರು ಸಾರಿ ಹೇಳಿದ್ದರು. ಏಕೀಕರಣದ ಶಕ್ತಿಯನ್ನು ಅವರು ಅರ್ಥ ಮಾಡಿಕೊಂಡಿದ್ದರು. ಅವರ ವ್ಯಕ್ತಿತ್ವಕ್ಕೆ ಮಾರು ಹೋಗಿ ದೇಶದ ರಾಜರು ತಮ್ಮ ಸಂಸ್ಥಾನಗಳನ್ನು ಒಪ್ಪಿಸಿದರು.
    ಇದೇ ಸ್ಥಳದಲ್ಲಿ ತಮ್ಮ ಸಂಸ್ಥಾನಗಳನ್ನು ದೇಶಕ್ಕೆ ಒಪ್ಪಿಸಿದ ರಾಜ-ಮಹಾರಾಜರ ತ್ಯಾಗ ಬಿಂಬಿಸುವ ಮ್ಯೂಸಿಯಂ ನಿಮರ್ಿಸುವ ಆಸೆ ನನಗೆ ಇದೆ. ಸಕರ್ಾರ ಆಡಳಿತ ಹೇಗೆ ನಡೆಸಬೇಕು ಎನ್ನುವುದನ್ನು ಸದರ್ಾರ್ ಪಟೇಲರು ಮಾಡಿ ತೋರಿಸಿದರು. ಸದರ್ಾರ್ ಪಟೇಲರ ಸಂಕಲ್ಪ ಇರದಿದ್ದರೆ ಕಾಶ್ಮೀರ-ಕನ್ಯಾಕುಮಾರಿ ರೈಲಿನ ಬಗ್ಗೆ ನಾವು ಯೋಚಿಸಲೂ ಸಾಧ್ಯವಾಗುತ್ತಿರಲಿಲ್ಲ. ದೇಶದ ನಾಗರೀಕ ಸೇವಾ ಪರೀಕ್ಷೆಗಳ ಯೋಚಿಸಲೂ ಆಗುತ್ತಿರಲಿಲ್ಲ ಎಂದು ಮೋದಿ ಹೇಳಿದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries