HEALTH TIPS

No title

               ತನಿಖಾ ಅಜರ್ಿಯನ್ನು ಹಿಂಪಡೆಯುವುದಿಲ್ಲ-ಬಿಜೆಪಿ ನೇತಾರ ಕೆ.ಸುರೇಂದ್ರನ್
     ಮಂಜೇಶ್ವರ: 2016 ರಲ್ಲಿ ನಡೆದ ಕೇರಳ ವಿಧಾನಸಭೆಯ ಚುನಾವಣೆಯಲ್ಲಿ ತಾನು ಸ್ಪಧರ್ಿಸಿದ್ದ ಮಂಜೇಶ್ವರ ಕ್ಷೇತ್ರ ಚುನಾವಣೆಯಲ್ಲಿ ಕಳ್ಳ ಮತದಾನ ನಡೆದಿದೆ ಎಂದು ಬಿಜೆಪಿ ನೇತಾರ ಕೆ.ಸುರೇಂದ್ರನ್ ಹೇಳಿದ್ದು, ಕಳ್ಳ ಮತದಾನದ ವಿರುದ್ಧ ತಾನು ನೀಡಿದ್ದ ದೂರನ್ನು ಹಿಂಪಡೆಯುವ ಪ್ರಶ್ನೆಯೇ ಇಲ್ಲ ಎಂದು ಬಿಜೆಪಿ ಕೇರಳ ಕಾರ್ಯದಶರ್ಿ ಹಾಗೂ ಮಂಜೇಶ್ವರ ಕ್ಷೇತ್ರ ಬಿಜೆಪಿ ಅಭ್ಯಥರ್ಿಯಾಗಿ ಸ್ಪಧರ್ಿಸಿದ್ದ ಕೆ.ಸುರೇಂದ್ರನ್ ಸ್ಪಷ್ಟಪಡಿಸಿದ್ದಾರೆ.
   ರಾಜ್ಯ ಎಡರಂಗ ಮತ್ತು ಐಕ್ಯರಂಗ ಒಟ್ಟಿಗೆ ಸೇರಿ ಕಳ್ಳ ಮತದಾನದ ಪ್ರಕರಣವನ್ನು ಮುಚ್ಚಲು ಪ್ರಯತ್ನಿಸುತ್ತಿವೆ ಎಂದು ಅವರು ಆರೋಪಿಸಿದ್ದಾರೆ. ಕಳ್ಳ ಮತದಾನದ ಮೂಲಕ ಪಿ.ಬಿ.ಅಬ್ದುಲ್ ರಜಾಕ್ 89 ಮತಗಳಿಂದ ಜಯಿಸಿದ್ದರು. ಚುನಾವಣೆಯಲ್ಲಿ ಒಟ್ಟು 291 ಕಳ್ಳ ಓಟುಗಳು ಐಕ್ಯರಂಗದ ಪರವಾಗಿ ಚಲಾವಣೆಯಾಗಿವೆ ಎಂದು ಹೈಕೋಟರ್್ಗೆ ಸಲ್ಲಿಸಿದ ಅಜರ್ಿಯಲ್ಲಿ ತಿಳಿಸಿದ್ದಾರೆ. ಇನ್ನೂ 67 ಮಂದಿ ಕಳ್ಳ ಮತದಾನ ಆರೋಪಿಗಳ ವಿಚಾರಣೆ ನಡೆಯಬೇಕಿದೆ ಎಂದು ಕೆ.ಸುರೇಂದ್ರನ್ ತಿಳಿಸಿದ್ದಾರೆ.
   ಶಾಸಕ ಪಿ.ಬಿ.ಅಬ್ದುಲ್ ರಜಾಕ್ ಅನಿರೀಕ್ಷಿತವಾಗಿ ಇತ್ತೀಚೆಗೆ ಮರಣ ಹೊಂದಿದ್ದರಿಂದ ತೆರವಾಗಿರುವ ಶಾಸಕ ಸ್ಥಾನಕ್ಕೆ ಮರು ಚುನಾವಣೆ ನಡೆಸಬೇಕೆಂಬ ಮಾತುಗಳು ಕೇಳಿಬರುತ್ತಿದ್ದು, ಇದೀಗ ಸುರೇಂದ್ರನ್ ನೀಡಿರುವ ಹೇಳಿಕೆಯಿಂದ ಮರು ಮತದಾನ ಗೊಂದಲದಲ್ಲಿದೆ.
   

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries