ಎಡರಂಗದ ನಾಸ್ತಿಕ ಸಿದ್ದಾಂತ ಜಾರಿಗೊಳಿಸಲು ಯತ್ನಿಸುತ್ತಿದೆ-ಸಂಸದ ಕಟೀಲ್
ಕಾಸರಗೋಡು: ಶಬರಿಮಲೆ ವಿಚಾರದಲ್ಲಿ ಕೇರಳದ ಎಡರಂಗ ಆಸ್ತಿಕ ಬಂಧುಗಳ ನಂಬಿಕೆಗೆ ಅಡಚಣೆ ಮಾಡುತ್ತಿರುವುದು ರಾಜ್ಯದಲ್ಲಿ ಎಡರಂಗದ ನಾಸ್ತಿಕ ಸಿದ್ದಾಂತ ಜಾರಿಗೊಳಿಸಲು. ಇದನ್ನು ಬಿಜೆಪಿ ಆಸ್ತಿಕರ ನಂಬಿಕೆಯ ಮೇಲಿನ ಶಕ್ತಿಯಲ್ಲಿ ಎದುರಿಸಲು ಸಜ್ಜಾಗಿದೆಯೆಂದು ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
ಕಾಸರಗೋಡು ಜಿಲ್ಲಾ ಬಿಜೆಪಿ ರಥಯಾತ್ರೆ ಯಶಸ್ವಿಗೆ ಜಿಲ್ಲಾ ನೇತೃತ್ವ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾಂಗ್ರೆಸ್ ಇಬ್ಬಗೆ ನೀತಿ ಅನುಸರಿಸುತ್ತಿದೆ. ರಾಹುಲ್ ಗಾಂಧಿ ಸ್ತ್ರಿ ಪ್ರವೇಶ ಸ್ವಾಗತಿಸಿ ಕಮ್ಯುನಿಸ್ಟ್ ರಿಗೆ ಬೆಂಬಲ ಸೂಚಿಸಿದ್ದಾರೆ, ಕೇರಳದ ಕಾಂಗ್ರೆಸ್ ಅಸ್ತಿಕ ಬಂಧುಗಳನ್ನು ಮೋಸ ಮಾಡಲು ರಾಜ್ಯದಲ್ಲಿ ಒಂದು ತೀಮರ್ಾನ, ಕಾಂಗ್ರೆಸ್ ಹೈಕಮಾಂಡ್ ಒಂದು ತೀಮರ್ಾನ ಕೈಗೊಂಡು ರಾಜಕೀಯ ಬೇಳೆ ಬೇಯಿಸುತ್ತಿದೆ ಎಂದು ಆರೋಪಿಸಿದರು. ಕೇರಳ ದ ಕಾಂಗ್ರೆಸ್ ನೇತೃತ್ವ ರಾಹುಲ್ ಗಾಂಧಿಯ ನಿರ್ಣಯ ಒಪ್ಪುದಿಲ್ಲವಾದರೆ, ಶಬರಿಮಲೆ ಭಕ್ತರ ಪರವಾಗಿದ್ದರೆ ಕಾಂಗ್ರೆಸ್ ನೇತಾರರು ರಾಜೀನಾಮೆ ನೀಡಿ ಬಿಜೆಪಿ ಯ ಹೋರಾಟಕ್ಕೆ ಬೆಂಬಲ ನೀಡಿ ಭಕ್ತರ ರಿಗೆ ಪ್ರಾಮಾಣಿಕತೆ ತೋರ್ಪಡಿಸಬೇಕೆಂದು ಸವಾಲು ಹಾಕಿದರು.
ಬಿಜೆಪಿ ಕೇರಳ ಘಟಕ ಹಮ್ಮಿಕೊಂಡಿರು ರಥಯಾತ್ರೆ 8 ರಂದು ಮಧುರೂ ಕ್ಷೇತ್ರದಿಂದ ಆರಂಭಗೊಂಡು ಶಬರಿಮಲೆಗೆ ಯಲ್ಲಿ ಸಮಾರೋಪಗೊಳ್ಳಲಿದೆ. ಈ ರಥಯಾತ್ರೆ ಕೇರಳದ ಅಸ್ತಿಕ ಸಮುದಾಯದ ಪುನರುತ್ತನಕ್ಕೆ ಶಕ್ತಿ ತುಂಬಲಿದೆ ಎಂದು ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಪ್ರಮೀಳಾ ಸಿ.ನಾಯ್ಕ್, ರವೀಶ ತಂತ್ರಿ ಕುಂಟಾರು, ಬಾಲಕೃಷ್ಣ ಶೆಟ್ಟಿ, ಸುರೇಶ್ ಶೆಟ್ಟಿ ಉಪಸ್ಥಿತರಿದ್ದರು. ಜಿಲ್ಲಾ ಕಾರ್ಯದಶರ್ಿ ವೇಲಾಯುಧನ್ ಸ್ವಾಗತಿಸಿ, ವಂದಿಸಿದರು.
ಕಾಸರಗೋಡು: ಶಬರಿಮಲೆ ವಿಚಾರದಲ್ಲಿ ಕೇರಳದ ಎಡರಂಗ ಆಸ್ತಿಕ ಬಂಧುಗಳ ನಂಬಿಕೆಗೆ ಅಡಚಣೆ ಮಾಡುತ್ತಿರುವುದು ರಾಜ್ಯದಲ್ಲಿ ಎಡರಂಗದ ನಾಸ್ತಿಕ ಸಿದ್ದಾಂತ ಜಾರಿಗೊಳಿಸಲು. ಇದನ್ನು ಬಿಜೆಪಿ ಆಸ್ತಿಕರ ನಂಬಿಕೆಯ ಮೇಲಿನ ಶಕ್ತಿಯಲ್ಲಿ ಎದುರಿಸಲು ಸಜ್ಜಾಗಿದೆಯೆಂದು ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
ಕಾಸರಗೋಡು ಜಿಲ್ಲಾ ಬಿಜೆಪಿ ರಥಯಾತ್ರೆ ಯಶಸ್ವಿಗೆ ಜಿಲ್ಲಾ ನೇತೃತ್ವ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾಂಗ್ರೆಸ್ ಇಬ್ಬಗೆ ನೀತಿ ಅನುಸರಿಸುತ್ತಿದೆ. ರಾಹುಲ್ ಗಾಂಧಿ ಸ್ತ್ರಿ ಪ್ರವೇಶ ಸ್ವಾಗತಿಸಿ ಕಮ್ಯುನಿಸ್ಟ್ ರಿಗೆ ಬೆಂಬಲ ಸೂಚಿಸಿದ್ದಾರೆ, ಕೇರಳದ ಕಾಂಗ್ರೆಸ್ ಅಸ್ತಿಕ ಬಂಧುಗಳನ್ನು ಮೋಸ ಮಾಡಲು ರಾಜ್ಯದಲ್ಲಿ ಒಂದು ತೀಮರ್ಾನ, ಕಾಂಗ್ರೆಸ್ ಹೈಕಮಾಂಡ್ ಒಂದು ತೀಮರ್ಾನ ಕೈಗೊಂಡು ರಾಜಕೀಯ ಬೇಳೆ ಬೇಯಿಸುತ್ತಿದೆ ಎಂದು ಆರೋಪಿಸಿದರು. ಕೇರಳ ದ ಕಾಂಗ್ರೆಸ್ ನೇತೃತ್ವ ರಾಹುಲ್ ಗಾಂಧಿಯ ನಿರ್ಣಯ ಒಪ್ಪುದಿಲ್ಲವಾದರೆ, ಶಬರಿಮಲೆ ಭಕ್ತರ ಪರವಾಗಿದ್ದರೆ ಕಾಂಗ್ರೆಸ್ ನೇತಾರರು ರಾಜೀನಾಮೆ ನೀಡಿ ಬಿಜೆಪಿ ಯ ಹೋರಾಟಕ್ಕೆ ಬೆಂಬಲ ನೀಡಿ ಭಕ್ತರ ರಿಗೆ ಪ್ರಾಮಾಣಿಕತೆ ತೋರ್ಪಡಿಸಬೇಕೆಂದು ಸವಾಲು ಹಾಕಿದರು.
ಬಿಜೆಪಿ ಕೇರಳ ಘಟಕ ಹಮ್ಮಿಕೊಂಡಿರು ರಥಯಾತ್ರೆ 8 ರಂದು ಮಧುರೂ ಕ್ಷೇತ್ರದಿಂದ ಆರಂಭಗೊಂಡು ಶಬರಿಮಲೆಗೆ ಯಲ್ಲಿ ಸಮಾರೋಪಗೊಳ್ಳಲಿದೆ. ಈ ರಥಯಾತ್ರೆ ಕೇರಳದ ಅಸ್ತಿಕ ಸಮುದಾಯದ ಪುನರುತ್ತನಕ್ಕೆ ಶಕ್ತಿ ತುಂಬಲಿದೆ ಎಂದು ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಪ್ರಮೀಳಾ ಸಿ.ನಾಯ್ಕ್, ರವೀಶ ತಂತ್ರಿ ಕುಂಟಾರು, ಬಾಲಕೃಷ್ಣ ಶೆಟ್ಟಿ, ಸುರೇಶ್ ಶೆಟ್ಟಿ ಉಪಸ್ಥಿತರಿದ್ದರು. ಜಿಲ್ಲಾ ಕಾರ್ಯದಶರ್ಿ ವೇಲಾಯುಧನ್ ಸ್ವಾಗತಿಸಿ, ವಂದಿಸಿದರು.