HEALTH TIPS

No title

              ಜೈಶ್ರೀರಾಮ್ ತಂಡದಿಂದ 19ನೇ ಸಹಾಯ ಹಸ್ತಾಂತರ
     ಮಂಜೇಶ್ವರ: ಜೈ ಶ್ರೀ ರಾಮ್ ಸಮಾಜ ಸೇವಾ ಸಂಸ್ಥೆ ಮಂಜೇಶ್ವರ ಇದರ ನವೆಂಬರ್ ತಿಂಗಳ 19 ನೇ ಯೋಜನೆ ಸಹಾಯ ಹಸ್ತವನ್ನು ಉಪ್ಪಳ ಬಳಿಯ ಮುಳಿಂಜ ಮಹಾ ನಗರ ನಿವಾಸಿ ದಿ. ಪದ್ಮನಾಭ ಭಂಡಾರಿಯವರ  ಪುತ್ರಿ ಪೂಣರ್ಿಮಾರ ವಿವಾಹಕ್ಕೆ ಗುರುವಾರ ನೀಡಲಾಯಿತು.
    ಪಾನ್ ಬೀಡ ಅಂಗಡಿ ಹೊಂದಿದ ಪಧ್ಮನಾಭರವರು ನಿಧನರಾದ ಬಳಿಕ ಪತ್ನಿ ವಿಜಯಲಕ್ಷಿ ತಮ್ಮ 3 ಹೆಣ್ಣು ಮಕ್ಕಳ ಜೊತೆ ಆದಾಯಗಳಿಲ್ಲದೆ ಸಂಕಷ್ಟದಿಂದ ಬದುಕುತ್ತಿದ್ದರು. ಇದೀಗ ಹರೆಯದ ಹಿರಿಯ ಮಗಳಿಗೆ ಪೆರ್ಲ ನಿವಾಸಿ ಜೊತೆ ನ. 9 ರಂದು ವಿವಾಹ ನಡೆಸಲು ನಿಶ್ಚಯಿಸಲಾಗಿದ್ದು, ಇವರ ಸಂಕಷ್ಟಕ್ಕೆ ಜೈ ಶ್ರೀ ರಾಮ್ ನೆರವಾಗಿದೆ.
    ತಮ್ಮ ಸದಸ್ಯರಿಂದಲೇ ಸಂಗ್ರಹಿಸಿದ ಮೊತ್ತವನ್ನು ಬುಧವಾರ  ಸಂಜೆ ಮನೆಗೆ ತೆರಳಿ ನೀಡಲಾಯಿತು. ಸಂಸ್ಥೆಯ ಗೌರವ ಮಾರ್ಗದರ್ಶಕ ರಾಜ ಬೆಳ್ಚಪ್ಪಾಡ ಉದ್ಯಾವರ ಮಾಡ ಅವರು  ಗೋಧೂಳಿ ಮುಹೂರ್ತದಲ್ಲಿ ಶ್ರೀ ದೇವರಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಸಹಾಯ ಹಸ್ತವನ್ನು ಪೂಣರ್ಿಮಾರ ಉಪಸ್ಥಿತಿಯಲ್ಲಿ ಅವರ ಹೆತ್ತವರಿಗೆ ನೀಡಿದರು. ಈ ಸಂದರ್ಭ ಜೈ ಶ್ರೀ ರಾಮ್ ಸಮಾಜ ಸೇವಾ ಸಂಸ್ಥೆಯ ಗೌರವ ಸಲಹೆಗಾರ ಗಿರಿ ವೀರನಗರ, ತುಳಸಿದಾಸ್ ಮಂಜೇಶ್ವರ, ದೀಪಕ್ ರಾಜ್ ಉಪ್ಪಳ, ಪ್ರಧಾನ ಸಂಚಾಲಕ ಸುಖೇಶ್ ಬೆಜ್ಜ, ಅಧ್ಯಕ್ಷ ರತನ್ ಕುಮಾರ್ ಹೊಸಂಗಡಿ, ಸದಸ್ಯರಾದ ಸತ್ಯ ವೀರ ನಗರ, ರೂಪೇಶ್ ಜೋಡುಕಲ್ಲು, ಕಿಶೋರ್ ಭಗವತೀ, ಗುರು ಕಿರಣ್ ಆಚಾರ್ಯ ಕಾಳಿಕಾಂಬ ಮೊದಲಾದವರು ಉಪಸ್ಥಿತರಿದ್ದರು.
    

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries