HEALTH TIPS

ನೀರ್ಚಾಲಿನಲ್ಲಿ ನಡೆಯಲಿದೆ ಕನ್ನಡದ ಹಬ್ಬ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಸಂಭ್ರಮದ ಸಿದ್ಧತೆ

ಬದಿಯಡ್ಕ : ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಆಶ್ರಯದಲ್ಲಿ 12ನೇ ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನವು 2019 ಜನವರಿ 19 ಹಾಗೂ 20ರಂದು ನೀರ್ಚಾಲಿನ ಮಹಾಜನ ಸಂಸ್ಕøತ ಕಾಲೇಜು ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆಯಲಿದೆ. ಈ ಸಮ್ಮೇಳನದ ಸ್ವಾಗತ ಸಮಿತಿ ರಚನಾ ಸಭೆಯು ಶುಕ್ರವಾರ ನೀರ್ಚಾಲು ಶಾಲೆಯಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿದ್ದ ಕಸಾಪ ಘಟಕದ ಅಧ್ಯಕ್ಷ ಎಸ್ ವಿ ಭಟ್ ಮಾತನಾಡಿ,' ಜಿಲ್ಲೆಯಲ್ಲಿ ಕನ್ನಡ ಭಾಷೆಯ ಸಾಂಸ್ಕøತಿಕ ಸಿರಿವಂತಿಕೆ ಹಾಗೂ ಭಾಷೆಯ ರಕ್ಷಣೆಗೆ ಕನ್ನಡಿಗರು ಬದ್ಧರಾಗಿದ್ದು, ಕನ್ನಡಿಗರ ಸಂಘಟನೆಯೇ ಸಮ್ಮೇಳನದ ಮೂಲ ಉದ್ದೇಶವಾಗಿದೆ. ಈ ಸಮಾವೇಶದಲ್ಲಿ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ವಿವಿಧ ಸಾಹಿತ್ಯ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಸಮ್ಮೇಳನ ನಡೆಯಲಿದೆ' ಎಂದು ಹೇಳಿದರು. ಸಭೆಯಲ್ಲಿ ಉಪಸ್ಥಿತರಿದ್ದ ನೀರ್ಚಾಲು ಶಾಲಾ ಪ್ರಬಂಧಕ ಜಯದೇವ ಖಂಡಿಗೆ ಮಾತನಾಡಿ,'ನೀರ್ಚಾಲು ಶಾಲೆಯು ಹುಟ್ಟಿನಿಂದಲೇ ಕನ್ನಡದ ಒಟ್ಟಿಗೆ ಇರುವಂತಹುದು. ಕನ್ನಡದ ಹಬ್ಬಕ್ಕೆ ಸಂಪೂರ್ಣ ಸಹಕಾರ ನೀಡುತ್ತಾ, ಕಾರ್ಯಕ್ರಮದ ಯಶಸ್ವಿಗೆ ಎಲ್ಲರ ಸಹಕಾರ ಕೋರಲಾಗುವುದು' ಎಂದು ಹೇಳಿದರು. ನೀರ್ಚಾಲು ಶಾಲಾ ಪ್ರಾಂಶುಪಾಲ ಶಿವಪ್ರಸಾದ್ ಎಂ ಕೆ, ಶಾಲಾ ಮುಖ್ಯ ಶಿಕ್ಷಕ ವೆಂಕಟ್ರಾಜ್ ಉಪಸ್ಥಿತರಿದ್ದರು. ಸಭೆಯಲ್ಲಿ ಮುಖಂಡರಾದ ನಿವೃತ್ತ ಸಹಾಯಕ ಜಿಲ್ಲಾಧಿಕಾರಿ ಬಿ. ಬಾಲಕೃಷ್ಣ ಅಗ್ಗಿತ್ತಾಯ, ಶಿವರಾಮ ಭಟ್ ಕಾರಿಂಜಹಳೆಮನೆ, ನ್ಯಾಯವಾದಿ ಥೋಮಸ್ ಡಿಸೋಜಾ, ಉಷಾ ಶಿವರಾಮ ಭಟ್, ವಿಜಯಾ ಸುಬ್ರಹ್ಮಣ್ಯ, ಡಾ. ಬೇ ಸಿ ಗೋಪಾಲಕೃಷ್ಣ ಭಟ್, ಪ್ರದೀಪ್ ಕುಮಾರ್ ಬೇಳ, ಸುಧೀರ್ ಕುಮಾರ ರೈ, ಡಾ. ರತ್ನಾಕರ ಮಲ್ಲಮೂಲೆ, ಬಾಲ ಮಧುರಕಾನನ, ವಿರಾಜ್ ಅಡೂರು, ವಿ ಬಿ ಕುಳಮರ್ವ, ಗೋವಿಂದ ಶರ್ಮ ಕೋರಿಕ್ಕಾರು, ಗೋವಿಂದ ಭಟ್ ಬಳ್ಳಮೂಲೆ ಮೊದಲಾದವರು ಭಾಗವಹಿಸಿದ್ದರು. ಧರ್ಮತ್ತಡ್ಕ ರಾಮಚಂದ್ರ ಭಟ್ ಸ್ವಾಗತಿಸಿ, ನವೀನ್‍ಚಂದ್ರ ಮಾಸ್ತರ್ ಮಾನ್ಯ ವಂದಿಸಿದರು. ಸುಬ್ಬಣ್ಣ ಶೆಟ್ಟಿ ನಿರೂಪಿಸಿದರು. ಸಮ್ಮೇಳನದ ಮುಂದಿನ ಸಿದ್ಧತಾ ಸಭೆಯ ಡಿ.18ರಂದು ಸಂಜೆ 4ಕ್ಕೆ ನೀರ್ಚಾಲು ಶಾಲೆಯಲ್ಲಿ ನಡೆಯಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries