ಪೆರ್ಲ: ವಿದ್ಯೆ ಎಂಬುದು ಕಸಿಯಲಾಗದ ಸಂಪತ್ತು. ಅದನ್ನು ಸಾಧ್ಯವಿದ್ದಷ್ಟು ಗಳಿಸಬೇಕು ಮತ್ತು ಬಳಸಬೇಕು ಎಂದು ಪೆರ್ಲ ಸತ್ಯನಾರಾಯಣ ಪ್ರೌಢ ಶಾಲೆಯ ನಿವೃತ್ತ ಶಿಕ್ಷಕಿ, ನಾಲಂದ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯೆ ಕೆ.ವಿ.ಪ್ರಭಾವತಿ ಅವರು ಹೇಳಿದರು.
ಅವರು ಪೆರ್ಲ ನಾಲಂದ ಕಾಲೇಜಿನ ಗ್ರಂಥಾಲಯದ ನೂತನ ಪರಾಮರ್ಶನ ವಿಭಾಗವನ್ನು ಉದ್ಘಾಟಿಸಿ ಮಾತನಾಡಿದರು.
ಇಂದಿನ ಬೆಳೆಯುತ್ತಿರುವ ಕಾಲಘಟ್ಟದಲ್ಲಿ ಹೊಸ ಸಂಶೋಧನಾ ಪ್ರಕ್ರಿಯೆಗಳು ನಡೆಸಬೇಕಾದರೆ ಕಾಲೇಜುಗಳಲ್ಲಿ ಪರಾಮರ್ಶನ ವಿಭಾಗ ಅತೀ ಅಗತ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕ್ಯಾಂಪೆÇ್ಕೀ ನಿರ್ದೇಶಕ, ಕಾಲೇಜಿನ ಆಡಳಿತ ಮಂಡಳಿಯ ಸದಸ್ಯ ಸತೀಶ್ಚಂದ್ರ ಭಂಡಾರಿ ಕೋಳಾರು ಅವರು ಮಾತನಾಡಿ ನಮ್ಮ ಕಾಲದಲ್ಲಿ ಕೃಷಿಗೆ ಪ್ರಧಾನ ಸ್ಥಾನ, ಕಲಿಕೆಗೆ ಎರಡನೇ ಸ್ಥಾನವಿತ್ತು. ಆದರೆ ಇಂದು ಕಲಿಕೆಗೆ ಪ್ರಧಾನ ಸ್ಥಾನ ದೊರಕಿದೆ ಮಾತ್ರವಲ್ಲದೆ ಪ್ರತಿಯೊಬ್ಬನೂ ಉನ್ನತ ವಿದ್ಯಾಭ್ಯಾಸವನ್ನು ಪಡೆದು ಉತ್ತಮ ನೌಕರಿಯನ್ನು ಪಡೆಯಬೇಕೆಂಬುದು ಇಂದಿನ ಹೆತ್ತವರ ಅಭಿಲಾಷೆ. ಆದುದರಿಂದ ಇಂದು ಸಾಕಷ್ಟು ಪೆÇ್ರೀತ್ಸಾಹ ಮನೆಯಿಂದ ದೊರಕುತ್ತದೆ. ಹಾಗಾಗಿ ಉನ್ನತ ವಿದ್ಯಾಭ್ಯಾಸ ಸಂಸ್ಥೆಗಳಲ್ಲಿ ವಿಪುಲವಾದ ಪರಾಮರ್ಶನ ಗ್ರಂಥಗಳು ಮತ್ತು ಅದಕ್ಕೆ ಪ್ರತ್ಯೇಕ ವಿಭಾಗ ಅತೀ ಅಗತ್ಯ. ಅಂತಹ ಮಹತ್ಕಾರ್ಯವನ್ನು ಪೆರ್ಲ ನಾಲಂದ ಕಾಲೇಜು ಮಾಡಿರುವುದು ಶ್ಲಾಘನೀಯ ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ.ವಿಘ್ನೇಶ್ವರ ವರ್ಮುಡಿ ಪ್ರಾಸ್ತಾವಿಕ ಮಾತುಗಳನ್ನಾಡಿ ಕಾಲೇಜುಗಳಲ್ಲಿ ಪರಾಮರ್ಶನ ವಿಭಾಗದ ಅಗತ್ಯತೆಯನ್ನು ತಿಳಿಸಿಕೊಟ್ಟರು. ಉಪನ್ಯಾಸಕ ಶ್ರೀನಿಧಿ ಸ್ವಾಗತಿಸಿ, ಗೀತಾ ವಿ.ಭಟ್ ವಂದಿಸಿದರು. ಶಿಲ್ಪ ಪಿ. ಕಾರ್ಯಕ್ರಮ ನಿರೂಪಿಸಿದರು.


