ಕಾಸರಗೋಡು: ಶಾಲಾ ವಿದ್ಯಾರ್ಥಿಗಳಿಗೆ ರಾಜ್ಯ ಮಟ್ಟದ ರಸಪ್ರಶ್ನೆ ಸ್ಪರ್ಧೆ ಅ.1ರಂದು ತಿರುವನಂತಪುರಂನಲ್ಲಿ ನಡೆಯಲಿದೆ.
ಮಹಾತ್ಮಾ ಗಾಂಧೀಜಿ ಅವರ 150ನೇ ಜನ್ಮದಿನಾಚರಣೆ ಅಂಗವಾಗಿ ಕೇರಳ ಗ್ರಾಮೋದ್ಯೋಗ ಮಂಡಳಿ ವತಿಯಿಂದ "ಪ್ರತಿ ಜ್ಞೆ -2019" ಎಂಬ ನಾಮಧೇಯದಲ್ಲಿ ಈ ಸ್ಪರ್ಧೆ ಜರುಗಲಿದೆ.
ಅ.1ರಂದು ಬೆಳಗ್ಗೆ 10ಗಂಟೆಗೆ ತಿರುವನಂತಪುರಂ ಅಯ್ಯಂಗಾಳಿ ಸಭಾಂಗಣದಲ್ಲಿ ಈ ಸ್ಪರ್ಧೆ ಜರುಗಲಿದೆ. ಪ್ರೌಢಶಾಲೆ-ಹೈಯರ್ ಸೆಕೆಂಡರಿ ಶಾಲೆ ವಿಭಾಗಗಳಲ್ಲಿತಲಾ ಇಬ್ಬರಂತೆ ಒಂದು ತಂಡ ಭಾಗವಹಿಸಬಹುದಾಗಿದೆ. ಶೇ 75 ಪ್ರಶ್ನೆಗಳು ಸಾಮಾಜಿಕ ಜ್ಞಾ ನಕ್ಕೆ ಸಂಬಂಧಿಸಿ, ಶೇ 25 ಪ್ರಶ್ನೆಗಳು ಗಾಂಧೀಜಿ ಮತ್ತು ಸ್ವಾತಂತ್ರ್ಯ ಹೋರಾಟಕ್ಕೆ ಸಂಬಧಿಸಿ ಇರುವುದು. ಆಸಕ್ತ ವಿದ್ಯಾರ್ಥಿಗಳು ಸೆ.28ರ ಮುಂಚಿತವಾಗಿ secretary@kkvib.org, iokkvib@gmail.com, io@kkvib.orgವಿಳಾಸದಲ್ಲಿ ಹೆಸರು ನೋಂದಣಿ ನಡೆಸಬೇಕು. ಮಾಹಿತಿಗೆ ದೂರವಾಣಿ ಸಂಖ್ಯೆ: 04672200585.(ಕೇರಳ ಖಾದಿ ಗ್ರಾಮೋದ್ಯೋಗ ಮಂಡಳಿ ಜಿಲ್ಲ ಕಚೇರಿ.), 9447271153/04712471694.

