HEALTH TIPS

ಸೆ.29ರಂದು ನೀರ್ಚಾಲಿನಲ್ಲಿ ಖಂಡಿಗೆ ಶಾಮಭಟ್ಟ ಜನ್ಮಶತಮಾನೋತ್ಸವ - ಸಂಸ್ಮರಣಾ ಸಭೆ, ಯಕ್ಷಗಾನ ತಾಳಮದ್ದಳೆ, ರಕ್ತದಾನ, ದಂತ ಹಾಗೂ ನೇತ್ರ ತಪಾಸಣಾ ಶಿಬಿರ


      ಬದಿಯಡ್ಕ: ನಾಡಿನಲ್ಲಿಯೇ ಪ್ರಖ್ಯಾತವಾದ ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಗಳ ನವನಿರ್ಮಾಪಕ ಹಾಗೂ ಧಾರ್ಮಿಕ, ಸಾಮಾಜಿಕ, ಸಾಂಸ್ಕøತಿಕ, ಸಹಕಾರಿ ರಂಗಗಳ ಧುರೀಣ ದಿ| ಖಂಡಿಗೆ ಶಾಮ ಭಟ್ಟ ಜನ್ಮಶತಮಾನೋತ್ಸವ ಸಮಾರಂಭವು ಸೆ.29ರಂದು ಭಾನುವಾರ ನೀರ್ಚಾಲಿನ ಮಹಾಜನ ವಿದ್ಯಾಸಂಸ್ಥೆಯಲ್ಲಿ ಜರಗಲಿರುವುದು. ಸಾಂಸ್ಕøತಿಕ ಹಾಗೂ ಕ್ರೀಯಾತ್ಮಕ ಕಾರ್ಯಕ್ರಮಗಳೊಂದಿಗೆ ಸಂಸ್ಮರಣಾ ಸಮಾರಂಭ ನಡೆಯಲಿದೆ.
     ಕಾರ್ಯಕ್ರಮಗಳು:
    ಪೂರ್ವಾಹ್ನ 9 ಗಂಟೆಯಿಂದ ಪ್ರಾರಂಭವಾಗಲಿರುವ ವೈದ್ಯಕೀಯ ಶಿಬಿರವನ್ನು ಕಾಸರಗೋಡಿನ ಪ್ರಖ್ಯಾತ ವೈದ್ಯ ಡಾ| ಬಿ.ಎಸ್.ರಾವ್ ಹಾಗೂ ರಕ್ತದಾನ ಶಿಬಿರವನ್ನು ಪ್ರಖ್ಯಾತ ಹಿರಿಯ ದಂತವೈದ್ಯ ಡಾ| ಕೆ.ಗಣಪತಿ ಭಟ್ ಉದ್ಘಾಟಿಸಲಿದ್ದಾರೆ. 
    ಬದಿಯಡ್ಕ ಗ್ರಾಮಪಂಚಾಯಿತಿ ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ. ಊರಪರವೂರ ಗಣ್ಯರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಮಧ್ಯಾಹ್ನ ಭೋಜನ, ಅಪರಾಹ್ನ ನುರಿತ ಕಲಾವಿದರ ಕೂಡುವಿಕೆಯಿಂದ ಯಕ್ಷಗಾನ ತಾಳಮದ್ದಳೆ `ಭೀಮಾಂಜನೇಯ'.
       ಸಂಸ್ಮರಣಾ ಸಮಾರಂಭ:
     ಅಪರಾಹ್ಣ 4 ಗಂಟೆಗೆ ಎಡನೀರು ಮಠಾಧೀಶ ಶ್ರೀ ಕೇಶವಾನಂದ ಭಾರತೀ ಶ್ರೀಗಳ ಆಗಮನ, ಪೂರ್ಣಕುಂಭ ಸ್ವಾಗತ, ಕಟ್ಟಡ ಲೋಕಾರ್ಪಣೆ, ಆಶೀರ್ವಚನ. ಜನ್ಮಶತಮಾನೋತ್ಸವ ಸಮಿತಿಯ ಗೌರವಾಧ್ಯಕ್ಷ ಡಾ| ಕೆ.ಮಹಾಲಿಂಗ ಭಟ್ಟ ಕಾನತ್ತಿಲ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ನ್ಯಾಯವಾದಿ ಐ.ವಿ.ಭಟ್ ಸಂಸ್ಮರಣಾ ಭಾಷಣ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ನಿವೃತ್ತ ಉಪಜಿಲ್ಲಾ ವಿದ್ಯಾಧಿಕಾರಿ ಸಾಹಿತಿ ಎ. ನರಸಿಂಹ ಭಟ್ಟ ಹಾಗೂ ನಿವೃತ್ತ ಸಂಸ್ಕøತ ಅಧ್ಯಾಪಕ ರಾಜಗೋಪಾಲ ಪುಣಿಂಚತ್ತಾಯ ಪುಂಡೂರು ಅವರನ್ನು ಸನ್ಮಾನಿಸಲಾಗುವುದು. `ಶತಮಾನ ಪ್ರಭಾ ಚಿತ್ರಸಂಪುಟ'ವನ್ನು ನಿವೃತ್ತ ಉಪಜಿಲ್ಲಾ ವಿದ್ಯಾಧಿಕಾರಿ ಕೈಲಾಸಮೂರ್ತಿ ಕೆ. ಅನಾವರಣಗೊಳಿಸಲಿದ್ದಾರೆ. ನಿವೃತ್ತ ಕನ್ನಡ ಪಂಡಿತ ಡಾ| ಸದಾಶಿವ ಭಟ್ಟ ಪಳ್ಳು, ನಿಡ್ಪಳ್ಳಿ ಶುಭಾಶಂಸನೆಗೈಯಲಿದ್ದಾರೆ. ಸಂಜೆ 6.30ರಿಂದ ಶಾಸ್ತ್ರೀಯ ಸಂಗೀತಕಚೇರಿ ನೀರ್ಚಾಲು ಆರಾಧನಾ ಸಂಗೀತ ವಿದ್ಯಾಲಯದ ವಿದ್ಯಾರ್ಥಿಗಳಾದ ಕು| ಹೇಮಶ್ರೀ ಕಾಕುಂಜೆ, ಕು| ಶ್ರೀವಾಣಿ ಕಾಕುಂಜೆ, ಕು| ರಮ್ಯಶ್ರೀ ಅಂಬಕಾನ ಇವರಿಂದ ಹಾಡುಗಾರಿಕೆ, ವಿದ್ವಾನ್ ಪ್ರಭಾಕರ ಕುಂಜಾರು, ಅಕ್ಷರ ಬೆದ್ರಡಿ ಕಲ್ಲಕಟ್ಟ ಪಕ್ಕವಾದ್ಯಗಳಲ್ಲಿ ಸಾಥ್ ನೀಡಲಿದ್ದಾರೆ.
          ವೈದ್ಯಕೀಯ ಶಿಬಿರಗಳು :
    ಮಂಗಳೂರಿನ ಎ.ಬಿ.ಶೆಟ್ಟಿ ಮೆಮೋರಿಯಲ್ ಇನ್ಸಿಟ್ಯೂಟ್ ಆಫ್ ಡೆಂಟಲ್ ಸೈನ್ಸ್‍ನ ನೇತೃತ್ವದಲ್ಲಿ ದಂತ ಚಿಕಿತ್ಸಾ ಶಿಬಿರ,ಮುಜುಂಗಾವು ಶ್ರೀ ಭಾರತೀ ನೇತ್ರಚಿಕಿತ್ಸಾಲಯದ ವತಿಯಿಂದ ಕಣ್ಣಿನ ಪೊರೆ ತಪಾಸಣಾ ಶಿಬಿರ, ನೀರ್ಚಾಲು ನಿವೇದಿತಾ ಸೇವಾ ಮಿಶನ್ ಹಾಗೂ ಮುಗು ವಾಟರ್ ಶೆಡ್ ಸಮಿತಿಯ ವತಿಯಿಂದ ರಕ್ತದಾನ ಶಿಬಿರ ನಡೆಯಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries