HEALTH TIPS

ಕುಂಬಳೆ ರೈಲ್ವೇ ಟರ್ಮಿನಲ್ ಅಭಿವೃದ್ಧಿಯ ಹೆಬ್ಬಾಗಿಲು : ಬಿಜೆಪಿ

    ಕುಂಬಳೆ:  ಕುಂಬಳೆ ರೈಲು ನಿಲ್ದಾಣವನ್ನು ರೈಲ್ವೇ ಟರ್ಮಿನಲ್ ಆಗಿ ಭಡ್ತಿಗೊಳಿಸುವ ಕೇಂದ್ರ ಸರಕಾರದ ತೀರ್ಮಾನದಿಂದ ಕಾಸರಗೋಡು ಜಿಲ್ಲೆಯ ಅಭಿವೃದ್ಧಿಯ ಹೆಬ್ಬಾಗಿಲು ಆಗಲಿದೆ ಎಂದು ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ಸಭೆಯಲ್ಲಿ ಅಭಿಪ್ರಾಯಪಟ್ಟಿದೆ.
      ಕುಂಬಳೆ ರೈಲು ನಿಲ್ದಾಣವನ್ನು ಭಡ್ತಿಗೊಳಿಸಲು ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ಹಲವು ಬಾರಿ ರೈಲ್ವೇ ಸಚಿವರಿಗೂ, ರೈಲ್ವೇ ಅ„ಕಾರಿಗಳಿಗೂ ಮನವಿ ಸಲ್ಲಿಸಿತ್ತು. ಅಗತ್ಯವುಳ್ಳ ಸ್ಥಳ ಕುಂಬಳೆಯಲ್ಲಿದೆ ಎಂದು ಮನವಿಯಲ್ಲಿ ಬೊಟ್ಟು ಮಾಡಿತ್ತು. ಕುಂಬಳೆ ರೈಲು ನಿಲ್ದಾಣಕ್ಕೆ 38 ಎಕರೆಗೂ ಅಧಿಕ ಸ್ಥಳವಿದೆ.
     ಕುಂಬಳೆಯಲ್ಲಿ ರೈಲ್ವೇ ಟರ್ಮಿನಲ್ ನಿರ್ಮಿಸುವ ಕೇಂದ್ರ ಸರಕಾರದ ತೀರ್ಮಾನವನ್ನು ಬಿಜೆಪಿ ಸ್ವಾಗತಿಸಿದೆ. ಉತ್ತರ ಮಲಬಾರ್ ರೈಲ್ವೇ ಕನಸುಗಳು ಅವಗಣನೆಗೆ ತುತ್ತಾಗಿತ್ತು. ನೂತನ ರೈಲುಗಳೂ, ಇತರ ಸೌಕರ್ಯಗಳು ಕನಸಾಗಿತ್ತು. ಮೋದಿ ಸರಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವುದರೊಂದಿಗೆ ಕಳೆದ ಐದು ವರ್ಷಗಳಲ್ಲಿ ಹಲವು ಅಂಡರ್ ಬ್ರಿಡ್ಜ್ ಮತ್ತು ಇತರ ಸೌಕರ್ಯಗಳು ನಿರ್ಮಾಣವಾಗಿದೆ ಎಂದು ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ಅಭಿಪ್ರಾಯಪಟ್ಟಿದೆ.
     ಸಭೆಯಲ್ಲಿ ಮಂಜೇಶ್ವರ ಮಂಡಲ ಬಿಜೆಪಿ ಅಧ್ಯಕ್ಷ ಸತೀಶ್ಚಂದ್ರ ಭಂಡಾರಿ ಅಧ್ಯಕ್ಷತೆ ವಹಿಸಿದರು. ಮಂಡಲ ಉಪಾಧ್ಯಕ್ಷ ಕೆ.ವಿನೋದನ್, ಜಿಲ್ಲಾ ಸಮಿತಿ ಸದಸ್ಯ ರಮೇಶ್ ಭಟ್, ಒಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಶಿ ಕುಂಬಳೆ, ಜಿಲ್ಲಾ ಸಮಿತಿ ಸದಸ್ಯ ಯಾದವ ಬಡಾಜೆ, ಮಂಗಲ್ಪಾಡಿ  ಪಂಚಾಯತಿ ಪ್ರಧಾನ ಕಾರ್ಯದರ್ಶಿ ದಿನೇಶ್ ಚೆರುಗೋಳಿ, ಕುಂಬಳೆ ಪಂಚಾಯತಿ ಬಿಜೆಪಿ ಅಧ್ಯಕ್ಷ ಶಂಕರ್ ಆಳ್ವ, ಪ್ರಧಾನ ಕಾರ್ಯದರ್ಶಿ ಸುಧಾಕರ ಕಾಮತ್, ಮಂಡಲ ಪ್ರಧಾನ ಕಾರ್ಯದರ್ಶಿ ಬಿ.ಎಂ.ಆದರ್ಶ್, ಮಂಡಲ ಕಾರ್ಯದರ್ಶಿ ಮಣಿಕಂಠ ರೈ ಮೊದಲಾದವರು ಮಾತನಾಡಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries