ಕಾಸರಗೋಡು: ಪ್ರಾಚೀನ ವಸ್ತುಗಳ ರಕ್ಷಣೆ ಹಾಗು ಐತಿಹಾಸಿಕ ಪರಂಪರೆ ಉಳಿಸಿಕೊಳ್ಳಲು ಶಾಲೆ ಶಾಲೆಗಳಲ್ಲಿ, ಮನೆ ಮನೆಗಳಲ್ಲಿ ಜನಜಾಗೃತಿ ಮೂಡಿಸುವ ಕೆಲಸಗಳಾಗಬೇಕೆಂದು ಕರಾವಳಿ ಸಾಂಸ್ಕøತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು ಅವರು ತಿಳಿಸಿದರು.
ಕರ್ನಾಟಕ ಇತಿಹಾಸ ಅಕಾಡೆಮಿ ಬೆಂಗಳೂರು ಮತ್ತು ರಾಜ್ಯ ಪುರಾತತ್ತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಮೈಸೂರು ಇದರ ಸಹಕಾರದೊಂದಿಗೆ ಕರಾವಳಿ ಸಾಂಸ್ಕøತಿಕ ಪ್ರತಿಷ್ಠಾನದ ನೇತೃತ್ವದಲ್ಲಿ ಪಾರೆಕಟ್ಟೆಯ ಕನ್ನಡ ಗ್ರಾಮದಲ್ಲಿ ಭಾನುವಾರ ಸಂಜೆ ನಡೆದ `ಐತಿಹಾಸಿಕ ಪರಂಪರೆ ಉಳಿಸಿ' ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣಗೈದು ಅವರು ಮಾತನಾಡಿದರು.
ಕೋಟೆ ಕೊತ್ತಲದ ಕಲ್ಲು ಕಿತ್ತರೆ ಪ್ರಾಚೀನ ಪರಂಪರೆಯ ಪಂಚಾಂಗ ಕಿತ್ತಂತೆ. ಹಳೆಯ ಕೆರೆಗಳ ನಿರ್ಲಕ್ಷ ತಂದಿತೆಮಗೆ ದುರ್ಭಿಕ್ಷ. ಪ್ರಾಚೀನ ದೇಗುಲ, ಶಿಲ್ಪ, ಮೂರ್ತಿ ನಮ್ಮ ಹಿರಿಯರ ಕಲೆಯ ಕೀರ್ತಿ, ಪ್ರಾಚೀನ ಇಗರ್ಜಿ, ಮಸೀದಿ ಗುಡಿ ನಮ್ಮ ಪರಂಪರೆಯ ಭವ್ಯ ಮುಡಿಯಾಗಿದ್ದು ಇವುಗಳನ್ನು ಉಳಿಸಿಕೊಳ್ಳುವ ಪ್ರಯತ್ನಗಳಾಗಬೇಕು. ಇಂದು ಕೋಟೆ, ಕೊತ್ತಲ, ತಾಳೆ ಹೊತ್ತಗೆ, ಶಾಸನ ಮೊದಲಾದ ಐತಿಹಾಸಿಕ ಮಹತ್ವದ ಪುರಾವೆಗಳು ನಾಶವಾಗುತ್ತಿದೆ. ಇವುಗಳನ್ನು ರಕ್ಷಿಸಲು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸಗಳಾಬೇಕು ಎಂದು ಅವರು ಹೇಳಿದರು. ಕಾಸರಗೋಡು ಜಿಲ್ಲೆಯಲ್ಲಿ ಹಲವು ಕೋಟೆ, ಕೊತ್ತಲಗಳು, ಶಾಸನಗಳು, ತಾಳೆ ಗರಿ ಲಿಪಿಗಳು ಮೊದಲಾದವುಗಳು ನಾಶವಾಗುತ್ತಿದೆ. ಈ ಕಾರಣದಿಂದ ಇಲ್ಲಿಯ ಪ್ರಾಚೀನ ಕನ್ನಡ, ತುಳು ನಾಡು ನುಡಿಯ ಅಸ್ಮಿತೆಗೆ ಭಾರೀ ಹಾನಿಯಾಗುವ ಭೀತಿಯಿದೆ. ಇವುಗಳನ್ನು ಉಳಿಸಿಕೊಳ್ಳಲು ಸಂಬಂಧಪಟ್ಟ ಇಲಾಖೆ ಅಭಿಯಾನವನ್ನೇ ಆರಂಭಿಸಬೇಕಾಗಿದೆ ಎಂದು ತಿಳಿಸಿದರು.
ಕಾಸರಗೋಡು ನಗರಸಭಾ ಸದಸ್ಯ ಕೆ.ಶಂಕರ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಧ್ಯಾಪಕ ಪ್ರಶಾಂತ್ ರೈ, ಕೆ.ಸಿ.ಎನ್. ಚಾನೆಲ್ ನಿರ್ದೇಶಕ ಪುರುಷೋತ್ತಮ್ ನಾೈಕ್, ಹರೀಶ್ಚಂದ್ರ ಸೂರ್ಲು, ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕದ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಟ್ ಕೆ. ಮೊದಲಾದವರು ಮಾತನಾಡಿದರು.ಈ ಸಂದರ್ಭ ಪರಂಪರೆಯ ಸಂರಕ್ಷಿಸುವ ನಿಟ್ಟಿನ ಪ್ರತಿಜ್ಞಾ ವಿದಿ ಸ್ವೀಕಾರ ನಡೆಯಿತು.ü
ಕಾರ್ಯಕ್ರಮದಲ್ಲಿ ಅಧ್ಯಾಪಕ ವಿನೋದ್ ರಾಜ್ ಪಿ.ಕೆ, ದಿವಾಕರ ಪಿ.ಅಶೋಕ್ನಗರ, ಶ್ರೀಕಾಂತ್ ಕಾಸರಗೋಡು, ಚಂದ್ರನ್ ತೆಕ್ಕಿಲ್, ಪ್ರಭಾಕರ ತೆಕ್ಕಿಲ್, ಜಯರಾಮ, ಮುರಳಿ ಪಾರೆಕಟ್ಟೆ, ಚಂದ್ರಶೇಖರ ಪಾರೆಕಟ್ಟೆ, ಕುಶಲ ಪಾರೆಕಟ್ಟೆ, ಮೋಹನನ್ ದೇಳಿ, ಗ್ರೀಷ್ಮಾ, ಕೃಪಾ, ಅನುಷಾ, ಪ್ರದೀಪ್ ಕುಮಾರ್ ಬೇಕಲ್ ಮೊದಲಾದವರು ಉಪಸ್ಥಿತರಿದ್ದರು. ಕಾವ್ಯ ಕುಶಲ ಸ್ವಾಗತಿಸಿ, ವಂದಿಸಿದರು.
ಕರ್ನಾಟಕ ಇತಿಹಾಸ ಅಕಾಡೆಮಿ ಬೆಂಗಳೂರು ಮತ್ತು ರಾಜ್ಯ ಪುರಾತತ್ತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಮೈಸೂರು ಇದರ ಸಹಕಾರದೊಂದಿಗೆ ಕರಾವಳಿ ಸಾಂಸ್ಕøತಿಕ ಪ್ರತಿಷ್ಠಾನದ ನೇತೃತ್ವದಲ್ಲಿ ಪಾರೆಕಟ್ಟೆಯ ಕನ್ನಡ ಗ್ರಾಮದಲ್ಲಿ ಭಾನುವಾರ ಸಂಜೆ ನಡೆದ `ಐತಿಹಾಸಿಕ ಪರಂಪರೆ ಉಳಿಸಿ' ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣಗೈದು ಅವರು ಮಾತನಾಡಿದರು.
ಕೋಟೆ ಕೊತ್ತಲದ ಕಲ್ಲು ಕಿತ್ತರೆ ಪ್ರಾಚೀನ ಪರಂಪರೆಯ ಪಂಚಾಂಗ ಕಿತ್ತಂತೆ. ಹಳೆಯ ಕೆರೆಗಳ ನಿರ್ಲಕ್ಷ ತಂದಿತೆಮಗೆ ದುರ್ಭಿಕ್ಷ. ಪ್ರಾಚೀನ ದೇಗುಲ, ಶಿಲ್ಪ, ಮೂರ್ತಿ ನಮ್ಮ ಹಿರಿಯರ ಕಲೆಯ ಕೀರ್ತಿ, ಪ್ರಾಚೀನ ಇಗರ್ಜಿ, ಮಸೀದಿ ಗುಡಿ ನಮ್ಮ ಪರಂಪರೆಯ ಭವ್ಯ ಮುಡಿಯಾಗಿದ್ದು ಇವುಗಳನ್ನು ಉಳಿಸಿಕೊಳ್ಳುವ ಪ್ರಯತ್ನಗಳಾಗಬೇಕು. ಇಂದು ಕೋಟೆ, ಕೊತ್ತಲ, ತಾಳೆ ಹೊತ್ತಗೆ, ಶಾಸನ ಮೊದಲಾದ ಐತಿಹಾಸಿಕ ಮಹತ್ವದ ಪುರಾವೆಗಳು ನಾಶವಾಗುತ್ತಿದೆ. ಇವುಗಳನ್ನು ರಕ್ಷಿಸಲು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸಗಳಾಬೇಕು ಎಂದು ಅವರು ಹೇಳಿದರು. ಕಾಸರಗೋಡು ಜಿಲ್ಲೆಯಲ್ಲಿ ಹಲವು ಕೋಟೆ, ಕೊತ್ತಲಗಳು, ಶಾಸನಗಳು, ತಾಳೆ ಗರಿ ಲಿಪಿಗಳು ಮೊದಲಾದವುಗಳು ನಾಶವಾಗುತ್ತಿದೆ. ಈ ಕಾರಣದಿಂದ ಇಲ್ಲಿಯ ಪ್ರಾಚೀನ ಕನ್ನಡ, ತುಳು ನಾಡು ನುಡಿಯ ಅಸ್ಮಿತೆಗೆ ಭಾರೀ ಹಾನಿಯಾಗುವ ಭೀತಿಯಿದೆ. ಇವುಗಳನ್ನು ಉಳಿಸಿಕೊಳ್ಳಲು ಸಂಬಂಧಪಟ್ಟ ಇಲಾಖೆ ಅಭಿಯಾನವನ್ನೇ ಆರಂಭಿಸಬೇಕಾಗಿದೆ ಎಂದು ತಿಳಿಸಿದರು.
ಕಾಸರಗೋಡು ನಗರಸಭಾ ಸದಸ್ಯ ಕೆ.ಶಂಕರ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಧ್ಯಾಪಕ ಪ್ರಶಾಂತ್ ರೈ, ಕೆ.ಸಿ.ಎನ್. ಚಾನೆಲ್ ನಿರ್ದೇಶಕ ಪುರುಷೋತ್ತಮ್ ನಾೈಕ್, ಹರೀಶ್ಚಂದ್ರ ಸೂರ್ಲು, ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕದ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಟ್ ಕೆ. ಮೊದಲಾದವರು ಮಾತನಾಡಿದರು.ಈ ಸಂದರ್ಭ ಪರಂಪರೆಯ ಸಂರಕ್ಷಿಸುವ ನಿಟ್ಟಿನ ಪ್ರತಿಜ್ಞಾ ವಿದಿ ಸ್ವೀಕಾರ ನಡೆಯಿತು.ü
ಕಾರ್ಯಕ್ರಮದಲ್ಲಿ ಅಧ್ಯಾಪಕ ವಿನೋದ್ ರಾಜ್ ಪಿ.ಕೆ, ದಿವಾಕರ ಪಿ.ಅಶೋಕ್ನಗರ, ಶ್ರೀಕಾಂತ್ ಕಾಸರಗೋಡು, ಚಂದ್ರನ್ ತೆಕ್ಕಿಲ್, ಪ್ರಭಾಕರ ತೆಕ್ಕಿಲ್, ಜಯರಾಮ, ಮುರಳಿ ಪಾರೆಕಟ್ಟೆ, ಚಂದ್ರಶೇಖರ ಪಾರೆಕಟ್ಟೆ, ಕುಶಲ ಪಾರೆಕಟ್ಟೆ, ಮೋಹನನ್ ದೇಳಿ, ಗ್ರೀಷ್ಮಾ, ಕೃಪಾ, ಅನುಷಾ, ಪ್ರದೀಪ್ ಕುಮಾರ್ ಬೇಕಲ್ ಮೊದಲಾದವರು ಉಪಸ್ಥಿತರಿದ್ದರು. ಕಾವ್ಯ ಕುಶಲ ಸ್ವಾಗತಿಸಿ, ವಂದಿಸಿದರು.


