ಉಪ್ಪಳ: ಪೈವಳಿಕೆ ಸಮೀಪದ ಬೆರಿಪದವು ಶ್ರೀ ಮೂಕಾಂಬಿಕಾ ಭಜನ ಮಂದಿರದಲ್ಲಿ ನ.10 ರಂದು ಹಿಂದೂಪುರ ಶ್ರೀ ದೇವಿ ಸೇವಾ ಸಮಿತಿ ನೇತೃತ್ವದಲ್ಲಿ 13 ನೇ ವರ್ಷದ ದೀಪಾವಳಿ ಸಂಭ್ರಮ ಮತ್ತು ಶ್ರೀ ಲಲಿತಾ ಮಹಾಯಾಗ ಜರಗಲಿದೆ.
ನ.9 ರಂದು ಬೆಳಿಗ್ಗೆ 7.30 ಕ್ಕೆ ತುಂಗಲಮೂಲೆ ನಾಗಬನದಲ್ಲಿ ಸಾರ್ವಜನಿಕ ನಾಗತಂಬಿಲ ಸೇವೆ, ನ.10 ರಂದು ಬೆಳಿಗ್ಗೆ 7 ಕ್ಕೆ ಶ್ರೀ ಗಣಪತಿ ಹವನ, 8.30 ರಿಂದ ಭಜನೆ, 9.30 ರಿಂದ ಶ್ರೀ ಲಲಿತಾ ಯಾಗ ಆರಂಭ, 11.30 ಕ್ಕೆ ಶ್ರೀ ಲಲಿತಾ ಯಾಗದ ಪೂರ್ಣಾಹುತಿ, ಮಹಾಪೂಜೆ, ಮಧ್ಯಾಹ್ನ 12 ರಿಂದ ಸಭಾ ಕಾರ್ಯಕ್ರಮ ನಡೆಯುವುದು. ಕಾರ್ಯಕ್ರಮದಲ್ಲಿ ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಆಶೀರ್ವಚನ ನೀಡುವರು.
12.30 ರಿಂದ ಪ್ರಸಾದ ವಿತರಣೆ, ಮಹಾ ಸಂತರ್ಪಣೆ, ಸಂಜೆ ಸಾಂಸ್ಕøತಿಕ ಕಾರ್ಯಕ್ರಮ, 5 ರಿಂದ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ, 6 ರಿಂದ ಯಕ್ಷಗಾನ ಬಯಲಾಟ ಜರಗಲಿದೆ.

