ಕಾಸರಗೋಡು: ಜಿಲ್ಲೆಯ ಇಕೋ ಕ್ಲಬ್ ಶಿಕ್ಷಕರಿಗೆ, ಸಂಶೋಧನೆ-ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಮತ್ತು ಸ್ವಯಂಸೇವಾ ಸಂಘಟನೆಗಳ ಕಾರ್ಯಕರ್ತರಿಗಾಗಿ ಒಂದು ದಿನದ ತರಬೇತಿ ಶಿಬಿರ ನ.2ರಂದು ಬೆಳಗ್ಗೆ 9.30ಕ್ಕೆ ಕಾಸರಗೋಡು ಸರಕಾರಿ ಕಾಲೇಜಿನ ವಿಚಾರಸಂಕಿರಣ ಸಭಾಂಗಣದಲ್ಲಿ ನಡೆಯಲಿದೆ.
ರಾಜ್ಯ ವಿ ಜ್ಞಾ ನ-ತಂತ್ರ ಜ್ಞಾ ನ-ಪರಿಸರ ಮಂಡಳಿಯ ಆರ್ಥಿಕ ಸಹಾಯದೊಂದಿಗೆ ಕಾಸರಗೋಡು ಪೀಪಲ್ಸ್ ಫಾರಂ, ಕಾಸರಗೋಡು ಸರಕಾರಿ ಕಾಲೇಜಿನ ಜಿಯಾಲಜಿ ವಿಭಾಗ ಜಂಟಿ ವತಿಯಿಂದ ಕಾರ್ಯಕ್ರಮ ನಡೆಯಲಿದೆ.
ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ.ಬಶೀರ್ ಶಿಬಿರ ಉದ್ಘಾಟಿಸುವರು. ಪ್ರಾಂಶುಪಾಲ ಡಾ.ಎ.ಎನ್.ಅನಂತಪದ್ಮನಾಭ ಅಧ್ಯಕ್ಷತೆ ವಹಿಸುವರು. ಗುಲ್ಬರ್ಗ ಕೇಂದ್ರ ವಿವಿಯ ಜಿಯಾಲಜಿ ಮುಖ್ಯಸ್ಥ ಡಾ.ಎಂ.ಎ.ಮಹಮ್ಮದ್ ಅಸ್ಲಂ ಪ್ರಧಾನ ಭಾಷಣಮಾಡುವರು. ಇಕೋ ಕ್ಲಬ್ ಜಿಲ್ಲ ಸಂಚಾಲಕ ಪ್ರೊ.ವಿ.ಗೋಪಿನಾಥ್, ಜಿಲ್ಲಾ ಶುಚಿತ್ವ ಮಿಷನ್ ಎ.ಡಿ.ಸಿ. ಪಿ.ವಿ.ಜಸೀರ್, ಪ್ರೊ.ಕೆ.ಶ್ರೀಮತಿ ಗೋಪಿನಾಥ್, ಕಾಲೇಜಿನ ಜಿಯಾಲಜಿ ವಿಭಾಗ ಮುಖ್ಯಸ್ಥ ಡಾ.ಎ.ಎನ್.ಮನೋಹರನ್, ಪೆರಿಯ ಕೇಂದ್ರ ವಿವಿ ಜಿಯಾಲಜಿ ವಿಭಾಗ ಮುಖ್ಯಸ್ಥ ಕೆ.ಸಂದೀಪ್, ಪೀಪಲ್ಸ್ ಫಾರಂ ಕಾರ್ಯದರ್ಶಿ ಎಂ.ಪದ್ಮಾಕ್ಷನ್ ಮೊದಲಾದವರು ತರಗತಿ ನಡೆಸುವರು.
ಸೆ.20ರಂದು ಪೆರಿಯ ಕೇಂದ್ರ ವಿವಿಯಲ್ಲಿ ನಡೆಸಲಾಗಿದ್ದ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗದೇ ಇದ್ದ ಕಾಸರಗೋಡು ಶೈಕ್ಷಣಿಕ ಜಿಲ್ಲೆಯ ಇಕೋ ಕ್ಲಬ್ ಶಿಕ್ಷಕರು ಈ ಶಿಬಿರದಲ್ಲಿ ಭಾಗವಹಿಸಬಹುದು. ದೂರವಾಣಿ ಸಂಖ್ಯೆ: 9446281854.