ಮಂಜೇಶ್ವರ: ಕೋಳ್ಯೂರು ಪದವು ಶ್ರೀಸತ್ಯನಾರಾಯಣ ಸ್ವಸಹಾಯ ಸಂಘದ 14ನೇ ವಾರ್ಷಿಕೋತ್ಸವವು ಭಾನುವಾರ ಕೋಳ್ಯೂರು ಪದವು ಶ್ರೀಸತ್ಯನಾರಾಯಣ ಭಜನಾ ಮಂದಿರದ ಪರಿಸರದಲ್ಲಿ ನಡೆಯಿತು.
ಜಮುನಾ ಜನಸೇವಾ ಸಂಘದ ಜಿಲ್ಲಾ ಕಾರ್ಯದರ್ಶಿ ಸದಾಶಿವ ಕಡಂಬಾರ್ ಅವರ ಉಪಸ್ಥಿತಿಯಲ್ಲಿ ಖ್ಯಾತ ನಾಟಿ ವೈದ್ಯ ಮೊಗಸಾಲೆ ಕೇಶವ ಭಟ್ ಅವರನ್ನು ಸನ್ಮಾನಿಸಲಾಯಿತು. ಜೊತೆಗೆ ಸ್ಥಳೀಯ ಪುಟಾಣಿಗಳಿಗೆ ಕುಣಿತ ಭಜನಾ ತರಬೇತಿ ನೀಡುತ್ತಿರುವ ಗಿರಿಯಪ್ಪ ಗುಂಡಮಜಲು ಅವರನ್ನು ಗೌರವಿಸಲಾಯಿತು. ಸ್ಥಳೀಯ ಪುಟಾಣಿಗಳ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಸಮಾರಂಭ ಸಂಪನ್ನಗೊಂಡಿತು.


